Advertisement

ಸಾಮಾಜಿಕ ಜಾಲ ತಾಣ ಪರಿಣಾಮ; ಕಾಲುಸಂಕ ನಿರ್ಮಾಣಕ್ಕೆ ನೆರವು

02:58 PM Jun 30, 2019 | Suhan S |

ಶಿರಸಿ: ಸಾಮಾಜಿಕ ಜಾಲ ತಾಣಗಳಲ್ಲಿ ವ್ಯಾಪಕವಾಗಿದ್ದ ಕಾಲಸಂಕವನ್ನು ಮಂಜೂರು ಮಾಡಿಸುವಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ನಿವೇದಿತ್‌ ಆಳ್ವಾ ಯಶಸ್ಸು ಪಡೆದಿದ್ದಾರೆ. ಸಿದ್ದಾಪುರ ತಾಲೂಕಿನ ಕಾವಂಚೂರು ಮತ್ತು ಮನಮನೆ ಗ್ರಾಪಂ ವ್ಯಾಪ್ತಿಯ ಬಸರಮನೆ ಹಳ್ಳಕ್ಕೆ ಕಾಲುಸಂಕದ ಅವಶ್ಯಕತೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ನಡೆದಿತ್ತು. ಇದಕ್ಕಾಗಿ ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ ಅವರ ಪ್ರಾದೇಶಿಕ ಅಭಿವೃದ್ಧಿ ನಿಧಿಯಲ್ಲಿ ಹತ್ತು ಲಕ್ಷ ರೂ.ಗಳನ್ನು ಆಳ್ವಾ ಮಂಜೂರಿ ಮಾಡಿಸಿ ಕೊಟ್ಟಿದ್ದಾರೆ. ಸುತ್ತಮುತ್ತಲ ಹಳ್ಳಿಗಳಲ್ಲಿ ಕಲ್ಲೂರಿನಲ್ಲಿ ಮಾತ್ರ ಶಾಲೆಯಿದ್ದು, ಸಾಮಾಜಿಕ ಜಾಲತಾಣದಲ್ಲಿ ಹೆಗ್ಗೆಕೊಪ್ಪದ ಶಾಲಾ ಮಕ್ಕಳು ತಮ್ಮ ಪ್ರಾಣ ಕೈಯಲ್ಲಿಟ್ಟುಕೊಂಡು ತುಂಬಿದ ಹೊಳೆ ದಾಟಿ ಓದು ಪಡೆಯಬೇಕಿತ್ತು ಎಂಬುದು ಉಲ್ಲೇಖನೀಯ ಎಂದು ಅರುಣೋದಯ ಸಂಸ್ಥೆ ಸತೀಶ ನಾಯ್ಕ ಹರ್ಷ ವ್ಯಕ್ತಪಡಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next