Advertisement

ದೂರು ನಿರ್ವಹಣೆ ಅಧಿಕಾರಿ ನೇಮಕ

01:10 PM Sep 24, 2018 | Team Udayavani |

ಹೊಸದಿಲ್ಲಿ: ಸುಳ್ಳು ಸುದ್ದಿಗಳನ್ನು ನಿಯಂತ್ರಿಸಬೇಕು ಎಂಬ ಒತ್ತಡ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ವಾಟ್ಸ್‌ಆ್ಯಪ್‌ ಈಗ ಭಾರತಕ್ಕೆಂದು ದೂರು ನಿರ್ವಹಣೆ ಅಧಿಕಾರಿಯನ್ನು ನೇಮಿಸಿದೆ. ದೂರು ನಿರ್ವಹಣೆ ಅಧಿಕಾರಿಯಾಗಿ ಕೋಮಲ್‌ ಲಾಹಿರಿ ಅವರನ್ನು ನೇಮಕ ಮಾಡಿರುವ ಬಗ್ಗೆ ವಾಟ್ಸ್‌ಆ್ಯಪ್‌ ತನ್ನ ವೆಬ್‌ಸೈಟ್‌ನಲ್ಲಿ ವಿವರಿಸಿದ್ದು, ದೂರುಗಳಿದ್ದರೆ ಅವರಿಗೆ ವರದಿ ಮಾಡುವಂತೆ ಸೂಚಿಸಿದೆ. ಮೂಲಗಳ ಪ್ರಕಾರ ಕೋಮಲ್‌ರನ್ನು ಆಗಸ್ಟ್‌ ಕೊನೆಯ ವಾರದಲ್ಲಿ ನೇಮಕ ಮಾಡಲಾಗಿದೆ.

Advertisement

ಭಾರತಕ್ಕಾಗಿ ದೂರು ನಿರ್ವಹಣೆ ಅಧಿಕಾರಿಯನ್ನು ನೇಮಿಸಬೇಕು ಎಂದು ಭಾರತ ಸರಕಾರ ಹಿಂದಿನಿಂದಲೂ ಆಗ್ರಹಿಸುತ್ತಿತ್ತು. ಇತ್ತೀಚೆಗೆ ವಾಟ್ಸ್‌ ಆ್ಯಪ್‌ನಲ್ಲಿ ಹರಡಿದ ಸುಳ್ಳು ಸುದ್ದಿಗಳಿಂದಾಗಿ ಸಾಮೂಹಿಕ ಥಳಿಸಿ ಹತ್ಯೆಯಂಥ ಪ್ರಕರಣಗಳು ನಡೆದಿದ್ದವು. ಇದು ವಾಟ್ಸ್‌ಆ್ಯಪ್‌ ಮೇಲೆ ಒತ್ತಡ ಹೆಚ್ಚಿಸಿತ್ತು. ಹೀಗಾಗಿ ಹಲವು ಕ್ರಮಗಳನ್ನು ವಾಟ್ಸ್‌ಆ್ಯಪ್‌ ಕೈಗೊಂಡಿತ್ತಾದರೂ, ಇವು ಸುಳ್ಳು ಸುದ್ದಿಗಳ ಹರಡುವಿಕೆ ತಡೆಯುವಲ್ಲಿ ಅಷ್ಟೇನೂ ಪರಿಣಾಮಕಾರಿಯಾಗಿಲ್ಲ ಎಂದು ಸರಕಾರ ಆರೋಪಿಸುತ್ತಲೇ ಇತ್ತು.

Advertisement

Udayavani is now on Telegram. Click here to join our channel and stay updated with the latest news.

Next