Advertisement
ಉಪ್ಪಿನಂಗಡಿ ರೋಟರಿ ಕ್ಲಬ್ಗ ಅಧಿಕೃತ ಭೇಟಿ ನೀಡಿದ ಅವರು ಬಳಿಕ ನಡೆದ ಸಭಾ ಕಾರ್ಯಕ್ರಮವನ್ನುದ್ದೇಶಿಸಿ ಮಾತ ನಾಡಿದರು.
Related Articles
Advertisement
ಅಂಡೆತ್ತಡ್ಕದ ಸ.ಉ.ಹಿ.ಪಾ. Åಶಾಲೆಗೆ 130 ಊಟದ ತಟ್ಟೆ ಹಾಗೂ ಗ್ಲಾಸ್ಗಳನ್ನು ಕೊಡುಗೆಯಾಗಿ ನೀಡಲಾಯಿತು. ಜಾರ್ಜ್ ನೊರೋನ್ಹಾ ಅವರು ಶಾಲೆಗೆ ದತ್ತಿ ನಿಧಿ ಸ್ಥಾಪಿಸಲು ನೆರವು ನೀಡಿದರು.ಪದಾಧಿಕಾರಿಗಳ ಆಯ್ಕೆ
ಸದಾಶಿವ ರೈ ಮಠಂತಬೆಟ್ಟು, ಮಹೇಶ್, ಸಮೀರ್ ಹಿರೇಬಂಡಾಡಿ, ಮಹೇಶ್ ಪಿ., ಉಮ್ಮರ್ ಕೊಯಿಲ, ಸುರೇಶ್ ಅತ್ರೆಮಜಲು, ವೇಣುಗೋಪಾಲ್, ಝಕಾ ರಿಯಾ ಕೊಡಿಪ್ಪಾಡಿ ಅವರಿಗೆ ರೋಟರಿ ಸದಸ್ಯತ್ವ ನೀಡಲಾಯಿತು. ರೋಟರ್ಯಾಕ್ಟ್ ಕ್ಲಬ್ನ ಅಧ್ಯಕ್ಷರಾಗಿ ಮುಹಮ್ಮದ್ ತೌಸೀಫ್ ಯು.ಟಿ., ಕಾರ್ಯದರ್ಶಿಯಾಗಿ ಚೇತನ್, ಕೋಶಾ ಧಿಕಾರಿಯಾಗಿ ಅಶ್ರಫ್ ಎಂ.ಜಿ., ಚೇರ್ವೆುನ್ ಆಗಿ ಅಶ್ರಫ್ ಅಗ್ನಾಡಿ ಅವರನ್ನು ನೇಮಕಗೊಳಿಸಲಾಯಿತು. ಉಪ್ಪಿನಂಗಡಿ ರೋಟರಿ ಕ್ಲಬ್ನ ನಿಕಟ ಪೂರ್ವಾಧ್ಯಕ್ಷ ವಿಜಯಕುಮಾರ್ ಕಲ್ಲಳಿಕೆ, ನಿಯೋಜಿತ ಅಧ್ಯಕ್ಷ ಸುಧಾಕರ ಶೆಟ್ಟಿ ಕೋಟೆ ಉಪಸ್ಥಿತರಿದ್ದರು. ನ್ಯಾಯವಾದಿ ಮನೋಹರ್ ಸ್ವಾಗತಿ ಸಿ, ಕಾರ್ಯದರ್ಶಿ ಹರೀಶ್ ನಾಯಕ್ ನಟ್ಟಿಬೈಲ್ ವಂದಿಸಿದರು. ಉಪ್ಪಿ ನಂಗಡಿ ಸರಕಾರಿ ಪ.ಪೂ. ಕಾಲೇಜಿನ ಪ್ರೌಢ ಶಾಲಾ ವಿಭಾಗದ ಉಪಪ್ರಾಂಶುಪಾಲ ದಿವಾಕರ ಆಚಾರ್ಯ ನಿರೂಪಿಸಿದರು. ರೋಟರಿಗಳಾದ ಶಿವಶಂಕರ್ ನಾಯಕ್, ಅಝೀಝ್ ಬಸ್ತಿಕ್ಕಾರ್, ಡಾ| ನಿರಂಜನ್ ರೈ, ಡಾ| ರಾಜಾರಾಮ್ ಕೆ.ಬಿ., ಅಬೂಬಕ್ಕರ್ ಪುತ್ತ, ಗುಣಕರ ಅಗ್ನಾಡಿ, ಕೇಶವ ಮುಡಿಪು, ಇಸ್ಮಾಯೀಲ್ ಇಕ್ಬಾಲ್ ಪಾಂಡೇಲು ಸಹಕರಿಸಿದರು. ಸೌಹಾರ್ದತೆ ಮೂಡಿಸುವ ಕೆಲಸ
ರೋಟರಿ ಕ್ಲಬ್ಗಳ ಮೂಲಕ ಸಮಾಜವನ್ನು ಸೌಹಾರ್ದತೆಯ ನೆಲೆಯಲ್ಲಿ ಒಗ್ಗೂ ಡಿಸುವುದರೊಂದಿಗೆ ಸಮಾಜಸೇವೆಯಲ್ಲಿ ತೊಡಗಿಸಿಕೊಂಡು ದೀನದಲಿತರ ಕಣ್ಣೀರೊರೆಸುವ ಕೆಲಸ ಮಾಡುತ್ತಿದೆ. ರೋಟರಿ ಕ್ಲಬ್ನೊಂದಿಗೆ ಕೈಜೋಡಿಸುವ ಮೂಲಕ ಯುವ ಮನಸ್ಸುಗಳು ಸಮಾಜಸೇವೆಯತ್ತ ಒಲವು ತೋರಬೇಕು ಎಂದು ಸುರೇಶ್ ಚೆಂಗಪ್ಪ ಎಂದರು.