Advertisement

ಸಿಎಂರಿಂದ ಸಮಾಜ ಒಡೆಯುವ ಕೆಲಸ

06:00 AM Apr 07, 2018 | Team Udayavani |

ಯಾದಗಿರಿ: ಚುನಾವಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೀರಶೈವ ಲಿಂಗಾಯತ ಸಮಾಜ
ಒಡೆಯುವ ಮೂಲಕ ಬೆಂಕಿ ಹಚ್ಚುವ ಕೆಲಸ ಮಾಡಿದ್ದಾರೆ ಎಂದು ಕಾಶಿ ಜಗದ್ಗುರು ಡಾ| ಚಂದ್ರಶೇಖರ ಶಿವಾಚಾರ್ಯ
ಭಗವತ್ಪಾದರು ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರಿಗೆ ವೀರಶೈವ ಲಿಂಗಾಯತ ಅಖಂಡ
ಧರ್ಮದ ಮಾನ್ಯತೆ ನೀಡಬೇಕು ಎಂದು ಕೇಳಿದ್ದೇವೆ. ರಾಜ್ಯದಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿ ಇರುವುದರಿಂದ ಅವರು ಯಾವುದೇ ಭರವಸೆ ನೀಡಿಲ್ಲ. ಯಾವುದೇ ಧರ್ಮದ ಹೆಸರು ಹೇಳದೆ ಧರ್ಮ ಒಡೆಯಲು ಅವಕಾಶ ಮಾಡಿಕೊಡುವುದಿಲ್ಲ ಎಂದು ಅಮಿತ್‌ ಶಾ ಹೇಳಿದ್ದಾರೆ.  ಇದನ್ನೇ ಕೆಲ ಮಠಾಧೀಶರು ತಪ್ಪಾಗಿ ಗ್ರಹಿಸಿಕೊಂಡು ಶಾ ಹೇಳಿಕೆ ವಿರೋಧಿಸಿ ಸಭೆ ನಡೆಸುವುದು ಸರಿಯಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next