Advertisement

ಪಾಕ್‌ನಿಂದ ಸ್ನೆ„ಪರ್‌ ದಾಳಿ: ಬಿಎಸ್‌ಎಫ್ ಅಧಿಕಾರಿ ಬಲಿ

03:53 AM Jan 16, 2019 | |

ಜಮ್ಮು: ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿ ರೇಖೆ (ಐಬಿ) ಕಥುವಾ ಜಿಲ್ಲೆಯ ಪ್ರಾಂತ್ಯದಲ್ಲಿ ಪಾಕಿಸ್ತಾನ ಸೇನೆ ನಡೆಸಿದ ಸ್ನೆ„ಪರ್‌ ದಾಳಿಯಲ್ಲಿ ಬಿಎಸ್‌ಎಫ್ನ ಅಸಿಸ್ಟೆಂಟ್ ಕಮಾಂಡೆಂಟ್ ವಿನಯ್‌ ಪ್ರಸಾದ್‌ ಹುತಾತ್ಮರಾಗಿದ್ದಾರೆ. ಹೀರಾನಗರ್‌- ಸಾಂಬಾ ಪ್ರಾಂತ್ಯದಲ್ಲಿ ಬೆಳಗ್ಗೆ 10:50ರ ಸುಮಾರಿಗೆ ಈ ಘಟನೆ ನಡೆದಿದ್ದು, ತೀವ್ರವಾಗಿ ಗಾಯಗೊಂಡ ವಿನಯ್‌ ಪ್ರಸಾದ್‌ ಅವರನ್ನು ಸತ್ವಾರಿಯಲ್ಲಿನ ಸೇನಾ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ, ಚಿಕಿತ್ಸೆ ಫ‌ಲಕಾರಿಯಾಗದೇ ಅವರು ಹುತಾತ್ಮರಾದರು ಎಂದು ಬಿಎಸ್‌ಎಫ್ ಹೇಳಿದೆ. ಮಂಗಳವಾರದಂದು, ಗಡಿ ನಿಯಂತ್ರಣ ರೇಖೆಯ ಸುಂದರ್‌ಬನಿ ಪ್ರಾಂತ್ಯದಲ್ಲೂ ಪಾಕಿಸ್ತಾನ ಸೇನೆ ಗುಂಡಿನ ದಾಳಿ ನಡೆಸಿದ್ದು, ಭಾರತೀಯ ಸೇನೆ ಸೂಕ್ತ ಪ್ರತ್ಯುತ್ತರ ನೀಡಿದೆ. 2018ರಲ್ಲಿ ಪಾಕಿಸ್ತಾನವು 2,936 ಬಾರಿ ಕದನ ವಿರಾಮ ಉಲ್ಲಂಘಿಸಿದ್ದು, ಇದು ಕಳೆದ 15 ವರ್ಷಗಳಲ್ಲೇ ಹೆಚ್ಚು ಎಂದು ಹೇಳಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next