Advertisement

Snake: ಹಾವು ಕಚ್ಚಿದ್ರು ಮುಳ್ಳು ಚುಚ್ಚಿದೆ ಎಂದು ಮಲಗಿದ್ದ ವ್ಯಕ್ತಿ ಬೆಳಗಾಗುತ್ತಲೇ ಮೃತ್ಯು

01:25 PM May 27, 2024 | Team Udayavani |

ಚಿಕ್ಕಮಗಳೂರು: ಹಾವು ಕಚ್ಚಿದ್ದರೂ ಮುಳ್ಳು ಚುಚ್ಚಿದೆ ಎಂದು ಹೇಳಿ ಮನೆಯಲ್ಲಿ ರಾತ್ರಿ ಊಟ ಮಾಡಿ ಮಲಗಿದ್ದ ವ್ಯಕ್ತಿ ಬೆಳಗಾಗುತ್ತಲೇ ಮೃತಪಟ್ಟ ವಿಚಿತ್ರ ಘಟನೆಯೊಂದು ತರೀಕೆರೆ ತಾಲೂಕಿನ ಕರಕುಚ್ಚಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

Advertisement

ಕರಕುಚ್ಚಿ ಗ್ರಾಮದ ಗಂಗಪ್ಪ (48) ಮೃತ ದುರ್ದೈವಿಯಾಗಿದ್ದಾರೆ.

ಗಂಗಪ್ಪ ಅವರು ಗದ್ದೆಗೆ ಕೆಲಸಕ್ಕೆ ಹೋಗಿದ್ದ ವೇಳೆ ಹಾವು ಕಡಿದಿದೆ ಆದರೆ ಇದರ ಅರಿವಾಗದ ಗಂಗಪ್ಪ ಮನೆಗೆ ಬಂದಿದ್ದಾರೆ ಈ ವೇಳೆ ಗಂಗಪ್ಪ ಅವರ ಕಾಲಿನಲ್ಲಿ ಗಾಯದ ಕಲೆಗಳನ್ನು ಕಂಡು ಮನೆಮಂದಿ ಕೇಳಿದಾಗ ಮುಳ್ಳು ಚುಚ್ಚಿ ಗಾಯವಾಗಿರಬೇಕು ಎಂದು ಹೇಳಿ ಊಟ ಮಾಡಿ ಮಲಗಿದ್ದಾರೆ, ಆದರೆ ಬೆಳಿಗ್ಗೆ ಮನೆಮಂದಿ ಎದ್ದು ಗಂಗಪ್ಪ ಅವರನ್ನು ಎಬ್ಬಿಸಿದರೆ ಏಳಲೇ ಇಲ್ಲ ಬಳಿಕ ಪರಿಶೀಲಿಸಿದಾಗ ಗಂಗಪ್ಪ ಅವರ ಕಾಲಿಗೆ ಮುಳ್ಳಿನ ಗಾಯವಾಗಿರುವುದಲ್ಲ ಬದಲಿಗೆ ಕಾವು ಕಚ್ಚಿ ಗಾಯವಾಗಿರುವುದು ಬೆಳಕಿಗೆ ಬಂದಿದೆ ಆದರೆ ಅಷ್ಟೋತ್ತಿಗಾಗಲೇ ಗಂಗಪ್ಪ ಅವರ ಪ್ರಾಣ ಪಕ್ಷಿ ಹಾರಿಹೋಗಿತ್ತು.

ಘಟನೆ ಸಂಬಂಧ ಲಕ್ಕವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Shivamogga: ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಸರ್ಕಾರಿ ನೌಕರ

Advertisement
Advertisement

Udayavani is now on Telegram. Click here to join our channel and stay updated with the latest news.

Next