Advertisement

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

09:32 AM Apr 26, 2024 | Team Udayavani |

ರಾಮನಗರ: ಜಿಲ್ಲೆಯ ನಾಲ್ಕು ಕ್ಷೇತ್ರದಲ್ಲೂ ಸ್ಮಾರ್ಟ್ ಕಾರ್ಡ್ ಸದ್ದು ಕೇಳಿಬರುತ್ತಿದೆ ಅಲ್ಲದೆ ಕಾಂಗ್ರೆಸ್ ಕಾರ್ಯಕರ್ತರು ಮತದಾರರಿಗೆ ಆಮಿಷವೊಡುತ್ತಿದ್ದಾರೆ ಎಂದು ಮೈತ್ರಿ ಕಾರ್ಯಕರ್ತರು ಆರೋಪ ಮಾಡುತಿದ್ದಾರೆ.

Advertisement

ಈ ನಡುವೆ ಜಿಲ್ಲೆಯಲ್ಲಿ ಸಾಕಷ್ಟು ಕಾಂಗ್ರೆಸ್ ಸ್ಮಾರ್ಟ್ ಕಾರ್ಡ್ ಪತ್ತೆ ಕೂಡ ಆಗಿವೆ. ಅಲ್ಲದೆ ಕಾಂಗ್ರೆಸ್ ಕಾರ್ಯಕರ್ತರು ಹಂಚಿಕೆ ಮಾಡಿದ್ದಾರೆ ಎನ್ನಲಾದ ಕಾರ್ಡ್ ಗಳ ಮೇಲೆ ಸಿದ್ದರಾಮಯ್ಯ, ಡಿಕೆಶಿ, ಸೇರಿ ಹಲವು ನಾಯಕರ ಫೋಟೋಗಳು ಕಂಡುಬಂದಿವೆ. ರಾಮನಗರದಲ್ಲಿ ಹಂಚಿಕೆ ಮಾಡುತ್ತಿರೋ ಕಾರ್ಡ್ ಮೇಲೆ ಡಿಕೆಶಿ, ಸಿದ್ದರಾಮಯ್ಯ ಪೋಟೋ ಪತ್ತೆ. ಮಾಗಡಿಯ ಕಾರ್ಡ್ ನಲ್ಲಿ ಬಾಲಕೃಷ್ಣ ಪೋಟೊ ಪತ್ತೆ. ಕನಕಪುರದಲ್ಲಿ ಡಿಕೆಶಿ ಪೋಟೋ ಹಾಗೆ ಚನ್ನಪಟ್ಟಣದಲ್ಲಿ ಜಿಲ್ಲಾಧ್ಯಕ್ಷ ಗಂಗಾಧರ್ ಪೋಟೋ ಪತ್ತೆಯಾಗಿದೆ.

ತಡರಾತ್ರಿಯಿಂದಲೂ ಕಾರ್ಡ್ ಹಂಚುತ್ತಿರೋ ಕೈ ಕಾರ್ಯಕರ್ತರನ್ನು ಮೈತ್ರಿ ಕಾರ್ಯಕರ್ತರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.

ಇದನ್ನೂ ಓದಿ: Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

Advertisement

Udayavani is now on Telegram. Click here to join our channel and stay updated with the latest news.

Next