Advertisement
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ. ಟ್ರಸ್ಟ್ ದಕ್ಷಿಣ ಕನ್ನಡ ಜಿಲ್ಲೆ-2ರ ಜಿಲ್ಲಾ ಕಚೇರಿಯನ್ನು ಬುಧವಾರ ಪುತ್ತೂರಿನಲ್ಲಿ ಉದ್ಘಾಟಿಸಿ ಸಾಲ್ಮರದ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮೇ ತಿಂಗಳಿನಿಂದ ಈ ತನಕ 2,500 ಹೊಸ ಸಂಘಗಳನ್ನು ರಚಿಸಲಾಗಿದೆ. ಯೋಜನೆಯ ವ್ಯವಸ್ಥೆ ಇನ್ನಷ್ಟು ವೇಗವಾಗಿ ಜನರಿಗೆ ತಲುಪಲು ಪೂರಕವಾಗುವ ನೆಲೆಯಲ್ಲಿ ಯೋಜನೆಯ ಜಿಲ್ಲಾ ಕೇಂದ್ರವನ್ನು ಪುತ್ತೂರಿನಲ್ಲಿ ತೆರೆಯಲಾಗಿದೆ ಎಂದರು.
Related Articles
Advertisement
ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್ ಅಧ್ಯಕ್ಷತೆವಹಿಸಿದ್ದರು. ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಎಲ್.ಎಚ್.ಮಂಜುನಾಥ್, ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ವೈದ್ಯ ಡಾ| ಎಂ.ಕೆ. ಪ್ರಸಾದ್ ಭಂಡಾರಿ ಶುಭ ಹಾರೈಸಿದರು. ಅಖೀಲ ಕರ್ನಾಟಕ ಜನಜಾಗೃತಿ ವೇದಿಕೆ ಪುತ್ತೂರು ತಾಲೂಕು ಅಧ್ಯಕ್ಷ ಮಹಾಬಲ ರೈ ವಳತ್ತಡ್ಕ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಕೇಂದ್ರ ಒಕ್ಕೂಟದ ಅಧ್ಯಕ್ಷ ಬಾಲಕೃಷ್ಣ ಗೌಡ ಹಾರ್ಪಳ ವೇದಿಕೆಯಲ್ಲಿದ್ದರು. ಅಖೀಲ ಕರ್ನಾಟಕ ಜನಜಾಗೃತಿ ವೇದಿಕೆ ವತಿ
ಯಿಂದ ಅಧ್ಯಕ್ಷ ಮಹಾಬಲ ರೈ ವಳತ್ತಡ್ಕ ಅವರನ್ನು ಗೌರವಿಸಲಾಯಿತು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ. ಟ್ರಸ್ಟ್ ಉಡುಪಿಯ ಪ್ರಾದೇಶಿಕ ನಿರ್ದೇಶಕ ವಸಂತ ಸಾಲಿಯಾನ್ ಸ್ವಾಗತಿಸಿದರು. ಯೋಜನೆಯ ದ.ಕ. ಜಿಲ್ಲೆ-2 ಪುತ್ತೂರಿನ ನಿರ್ದೇಶಕ ಪ್ರವೀಣ್ ಕುಮಾರ್ ವಂದಿಸಿದರು. ಸುಧಾ ಉದಯ ರೈ ಹಾಗೂ ಉಮೇಶ್ ನಿರ್ವಹಿಸಿದರು. ಪ್ಲಾಸ್ಟಿಕ್ ವಿರುದ್ಧ ಹೆಗ್ಗೆಡೆ ಜಾಗೃತಿ
ಜಿಲ್ಲಾ ಕಚೇರಿಯ ನಿರ್ದೇಶಕರ ಕೊಠಡಿಯಲ್ಲಿ ಇರಿಸಲಾಗಿದ್ದ ಮೂರ್ತಿಯೊಂದಕ್ಕೆ ಪ್ಲಾಸ್ಟಿಕ್ ಲ್ಯಾಮಿನೇಶನ್ ಇರುವುದನ್ನು ಗಮನಿಸಿದ ಡಾ| ಹೆಗ್ಗಡೆ ಅವರು ಪ್ಲಾಸ್ಟಿಕ್ ಹೊದಿಕೆಯನ್ನು ಸ್ವತಃ ತೆರವು ಮಾಡುವ ಮೂಲಕ ಪ್ಲಾಸ್ಟಿಕ್ ಬಳಕೆ ನಿಯಂತ್ರಣದ ಬಗ್ಗೆ ಜಾಗೃತಿ ಮೂಡಿಸಿದ ವಿದ್ಯಾಮಾನ ನಡೆಯಿತು.