Advertisement

Facebook ಗೆಳೆತಿಗಾಗಿ ಪಾಕ್ ನಲ್ಲಿ 6ವರ್ಷ ಬಂಧಿಯಾಗಿದ್ದ ಮುಂಬೈ ಯುವಕ!

02:48 PM Dec 18, 2018 | Team Udayavani |

ನವದೆಹಲಿ/ಇಸ್ಲಾಮಾಬಾದ್:ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಯುವತಿಯನ್ನು ಭೇಟಿಯಾಗುವ ಕುತೂಹಲದಿಂದ ಅಕ್ರಮವಾಗಿ ಪಾಕಿಸ್ತಾನದೊಳಕ್ಕೆ ಪ್ರವೇಶಿಸಿ ಜೈಲುಶಿಕ್ಷೆ ಅನುಭವಿಸಿದ್ದ ಮುಂಬೈಯ ಯುವಕ ಹಮೀದ್ ನೆಹಾಲ್ ಅನ್ಸಾರಿಯನ್ನು ಪಾಕ್ ಸರ್ಕಾರ ಮಂಗಳವಾರ ಬಿಡುಗಡೆಗೊಳಿಸಿದೆ.

Advertisement

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಈ ಬಗ್ಗೆ ಪ್ರಕಟಣೆ ನೀಡಿದ್ದು, ಈ ಪ್ರಕರಣ ಅನ್ನಾರಿ ಕುಟುಂಬ ವರ್ಗಕ್ಕೆ ದೊಡ್ಡ ನಿಟ್ಟುಸಿರು ಬಿಡುವಂತೆ ಮಾಡಿದೆ ಎಂದು ತಿಳಿಸಿದ್ದಾರೆ.

ಪಾಕಿಸ್ತಾನದ ಜೈಲಿನಲ್ಲಿರುವ ಹಮೀದ್ ನೆಹಾಲ್ ಅನ್ಸಾರಿಯ ಜೈಲುಶಿಕ್ಷೆ ಮುಗಿದ ಕೂಡಲೇ ಭಾರತಕ್ಕೆ ಕಳುಹಿಸುವಂತೆ ಕೇಂದ್ರ ಸರ್ಕಾರ ಡಿಸೆಂಬರ್ 11ರಂದು ಪಾಕಿಸ್ತಾನಕ್ಕೆ ಮನವಿ ಮಾಡಿತ್ತು. ಏತನ್ಮಧ್ಯೆ ಭಾನುವಾರ ಅನ್ಸಾರಿಯ ಜೈಲುಶಿಕ್ಷೆ ಪೂರ್ಣಗೊಂಡಿದ್ದರೂ ಕೂಡಾ ಪಾಕಿಸ್ತಾನ ಆತನನ್ನು ಗೂಢಚಾರ ಎಂದೇ ಬಣ್ಣಿಸಿತ್ತು ಎಂದು ವರದಿ ವಿವರಿಸಿದೆ.

ಫೇಸ್ ಬುಕ್ ಗೆಳತಿಯ ಬಲವಂತದ ಮದುವೆ ನಿಲ್ಲಿಸಲು ಹೋಗಿದ್ದ!

Advertisement

33ರ ಹರೆಯದ ಇಂಜಿನಿಯರ್ ಅನ್ಸಾರಿ ಖೈಬರ್ ಫಾಖ್ತುನ್ ಖಾವಾ ಪ್ರಾಂತ್ಯದ ಫೇಸ್ ಬುಕ್ ನಲ್ಲಿ ಪರಿಚಯವಾಗಿದ್ದ ಗೆಳತಿಯ ಬಲವಂತದ ವಿವಾಹವನ್ನು ತಡೆದು ರಕ್ಷಿಸುವ ನಿಟ್ಟಿನಲ್ಲಿ 2012ರ ನವೆಂಬರ್ 12ರಂದು ಅಫ್ಘಾನಿಸ್ತಾನದ ಗಡಿದಾಟಿ ಜಲಾಲಬಾದ್ ನಿಂದ ಪೇಶಾವರಕ್ಕೆ ತೆರಳಿ ಪಾಕಿಸ್ತಾನವನ್ನು ಪ್ರವೇಶಿಸಿದ್ದ.

2012ರ ನವೆಂಬರ್ ನಿಂದ ನಾಪತ್ತೆಯಾಗಿದ್ದ ಅನ್ಸಾರಿಯನ್ನು ಹುಡುಕಿಕೊಡುವಂತೆ ಮನೆಯವರು ಮನವಿ ಮಾಡಿದ್ದರು. ಏತನ್ಮಧ್ಯೆ ಕಾನೂನು ಬಾಹಿರವಾಗಿ ಪಾಕಿಸ್ತಾನವನ್ನು ಪ್ರವೇಶಿಸಿದ್ದ ಅನ್ಸಾರಿ ಪಾಕ್ ಗುಪ್ತಚರ ಇಲಾಖೆಯ ಕೈಗೆ ಸಿಕ್ಕಿಬಿದ್ದಿದ್ದ. ಅನ್ಸಾರಿ ಭಾರತದ ಗೂಢಚಾರ ಎಂದೇ ಪ್ರತಿಪಾದಿಸಿದ್ದು, ಸೇನಾ ಕೋರ್ಟ್ ಅನ್ಸಾರಿಗೆ ಮೂರು ವರ್ಷಗಳ ಜೈಲುಶಿಕ್ಷೆ ವಿಧಿಸಿತ್ತು. ಹೀಗೆ ಸುಮಾರು ಆರು ವರ್ಷಗಳ ಕಾಲ ಬಂಧನದಲ್ಲಿದ್ದ ಅನ್ಸಾರಿ ಬಿಡುಗಡೆಗಾಗಿ ಮುಂಬೈ ಭಾರತೀಯ ಜನತಾ ಪಕ್ಷದ ಕಾರ್ಯಕರ್ತ ಕೃಷ್ಣ ಹೆಗಡೆ ಅವರು ಸಹಾಯ ಹಸ್ತ ಚಾಚಿದ್ದರು. ನವದೆಹಲಿಯ ಪಾಕಿಸ್ತಾನದ ಹೈಕಮಿಷನ್ ಗೆ ತೆರಳಿ ಭಾರತಕ್ಕೆ ವಾಪಸ್ಸಾಗುವ ಪ್ರಕ್ರಿಯೆನ್ನು ಪೂರ್ಣಗೊಳಿಸಿದ್ದರು ಎಂದು ವರದಿ ತಿಳಿಸಿದೆ.

ಪಾಕಿಸ್ತಾನದ ಜೈಲಿನಿಂದ ಬಿಡುಗಡೆಗೊಂಡ ಅನ್ಸಾರಿಯನ್ನು ಅಧಿಕಾರಿಗಳು ವಾಘಾ ಗಡಿಯಲ್ಲಿ ಭಾರತೀಯ ಅಧಿಕಾರಿಗಳಿಗೆ ಇಂದು ಮಧ್ಯಾಹ್ನ ಹಸ್ತಾಂತರಿಸಿರುವುದಾಗಿ ಪಿಐಪಿಎಫ್ ಪಿಡಿಯ ಪ್ರಧಾನ ಕಾರ್ಯದರ್ಶಿ ಜತಿನ್ ದೇಸಾಯಿ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next