Advertisement

ಕ್ರೂಸರ್‌-ಬಸ್‌ ಡಿಕ್ಕಿ: 6 ಮಂದಿ ಸಾವು

07:45 AM Sep 09, 2017 | Team Udayavani |

ಬೀಳಗಿ (ಬಾಗಲಕೋಟೆ): ಕ್ರೂಸರ್‌ ಹಾಗೂ ಸರ್ಕಾರಿ ಬಸ್‌ ಡಿಕ್ಕಿ ಸಂಭವಿಸಿ ಇಬ್ಬರು ಮಹಿಳೆಯರು ಸೇರಿ ಆರು ಮಂದಿ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಕೊರ್ತಿ ಹಳೆ ರಸ್ತೆ ಸಮೀಪದ 218ರ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಬೆಳಗಿನ ಜಾವ ಸಂಭವಿಸಿದೆ.

Advertisement

ಸೊಲ್ಲಾಪುರ ಜಿಲ್ಲೆಯ ಮಾಡ ತಾಲೂಕಿನ ದಾರಪಾಳ್‌ಸೀನಾ ಗ್ರಾಮದ ವಿಜಯಾ ಶಿಂಧೆ (56), ರಜನಿ ಶಿಂಧೆ (50) ಹಾಗೂ ಪಾಂಡು ರಂಗ ಸಾಳುಂಕೆ(39), ಇರುದಗಿ ಗ್ರಾಮದ ಸುಗ್ರೀವ್‌ ಭಾನುದಾಸ್‌ (40), ಉಪಳಾಯಿ ಗ್ರಾಮದ ಕ್ರೂಸರ್‌ ವಾಹನ ಚಾಲಕ ನಾಗೇಶ್‌ ರಾವುತ್‌ (35), ಸೊಲ್ಲಾಪುರ ಸಮೀಪದ ಸಿದ್ದಾಪುರದ ಅಮುಲ್‌ ಮಾಳಗಿ (36)ಮೃತಪಟ್ಟವರು.

ಮಹಾರಾಷ್ಟ್ರ ಮೂಲದ ಕ್ರೂಸರ್‌ ವಾಹನದಲ್ಲಿ ಎಂಟು ಜನ ಪ್ರಯಾಣಿಸುತ್ತಿದ್ದರು. ಡಿಕ್ಕಿ ರಭಸಕ್ಕೆ ಕ್ರೂಸರ್‌ ಸಂಪೂರ್ಣ ನಜ್ಜುಗುಜ್ಜಾಗಿದೆ. ಕ್ಯಾನ್ಸರ್‌ ರೋಗಕ್ಕೆ ಔಷಧಿ ತರಲೆಂದು ಶಿವಮೊಗ್ಗಕ್ಕೆ ಹೋಗಿ ಮರಳಿ ಊರಿಗೆ ವಾಪಸ್‌ ಆಗುತ್ತಿದ್ದಾಗ ಈ ದುರ್ಘ‌ಟನೆ ಸಂಭವಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next