Advertisement
ಕುಂದರಗಿ ಸಮೀಪದ ಜಕ್ಕೊಳ್ಳಿ ದೊಡ್ಡಬೇಣದ ಸರಿತಾ ಆದಿತ್ಯ ನಾಯ್ಕ (26), ಶ್ವೇತಾ ದಿನೇಶ ನಾಯ್ಕ (30) ಮತ್ತು ಗೌರಿ ಶಿವಾ ನಾಯ್ಕ (55) ಮೃತಪಟ್ಟವರು. ಸರಿತಾ ತೋಟದ ಬಾವಿಯಿಂದ ನೀರು ತರಲು ಹೋದಾಗ ಕಾಲು ಜಾರಿ ಬಿದ್ದಿದ್ದು, ಅವರನ್ನು ರಕ್ಷಿಸಲು ಅತ್ತಿಗೆ ಶ್ವೇತಾ ನೀರಿಗೆ ಧುಮುಕಿದ್ದಾರೆ. ಇಬ್ಬರೂ ಸುಳಿಗೆ ಸಿಲುಕಿ ಮೃತಪಟ್ಟರು. ಪುತ್ರಿ, ಸೊಸೆ ಮೃತಪಟ್ಟ ವಿಷಯ ತಿಳಿದು ಗೌರಿ ನಾಯ್ಕ ಆಘಾತದಿಂದ ಅಸ್ವಸ್ಥರಾದರು. ಆಸ್ಪತ್ರೆಗೆ ಕರೆದೊ ಯ್ಯುವಾಗ ಮೃತಪಟ್ಟರು.
ಯಲ್ಲಾಪುರ ಪಟ್ಟಣದ ಬೊಂಡಗೆಸರದಲ್ಲಿ ಬುಧವಾರ ರಾತ್ರಿ ಮನೆ ಅಂಗಳದಲ್ಲಿದ್ದ ಉರುವಲು ಕಟ್ಟಿಗೆ ತರಲು ಹೋದಾಗ ಸಿಡಿಲು ಬಡಿದು ಸುಮಿತ್ರಾ ಗಣಪತಿ ಮರಾಠಿ (50) ಮೃತಪಟ್ಟಿದ್ದಾರೆ.