Advertisement

ದಾವಣಗೆರೆ: ಸಹೋದರಿಯರ ಜೋಡಿ ಕೊಲೆ, ಕೆಟ್ಟ ವಾಸನೆ ಬಂದಾಗಲೇ ತಿಳಿಯಿತು ವಿಚಾರ!

10:30 AM Jul 30, 2021 | Team Udayavani |

ದಾವಣಗೆರೆ: ಇಲ್ಲಿನ ಹೊರ ವಲಯದ ಆಂಜನೇಯ ಕಾಟನ್ ಮಿಲ್ ಬಡಾವಣೆಯಲ್ಲಿ ಸಹೋದರಿಯರ ಜೋಡಿ ಕೊಲೆ ನಡೆದಿದೆ. ಗೌರಮ್ಮ ಮತ್ತು ರಾಧಿಕ ಕೊಲೆಯಾದವರು.

Advertisement

ಇಬ್ಬರಿಗೂ ವಿವಾಹವಾಗಿತ್ತು. ಕಾರಣಾಂತರಗಳಿಂದ ವಿಚ್ಛೇದನ ಪಡೆದ ನಂತರ ಇಬ್ಬರು ಒಂದೇ ಮನೆಯಲ್ಲಿ ವಾಸವಾಗಿದ್ದರು. ಕೂಲಿ ಕೆಲಸ ಮಾಡಿಕೊಂಡು ಜೀವನ ನಿರ್ವಹಣೆ ಮಾಡಿಕೊಂಡಿದ್ದರು. ಎರಡು ಮೂರು ದಿನಗಳಿಂದ ಕೆಲಸಕ್ಕೆ ಬಾರದೇ ಇರುವುದರಿಂದ ಅನುಮಾನಗೊಂಡ ಚಂದ್ರಮ್ಮ ಎಂಬುವರು ಕರೆ ಮಾಡಿದರೂ ಸ್ವೀಕರಿಸರಲಿಲ್ಲ.

ಇದನ್ನೂ ಓದಿ:ಬಂಟ್ವಾಳ: ರೈಲ್ವೆ ಹಳಿಯ ಮೇಲೆ ಯುವಕನ ಮೃತದೇಹ ಪತ್ತೆ

ಮನೆಯ ಬಳಿ ಹೋಗಿ ನೋಡಿದಾಗ ಕೆಟ್ಟ ವಾಸನೆ ಬರುತ್ತಿತ್ತು. ವಿದ್ಯಾನಗರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಧಾವಿಸಿದ ಪೊಲೀಸರು ಮನೆಯ ಬಾಗಿಲು ತೆರೆದು ಪರಿಶೀಲಿಸಿದಾಗ ಇಬ್ಬರು ಸಹೋದರಿಯರು ಕೊಲೆಯಾಗಿರುವುದು ಬೆಳಕಿಗೆ ಬಂದಿದೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next