Advertisement

Siruguppa:ನೀರು ಕುಡಿತ್ತಿದ್ದ ಹಸುವನ್ನು ಎಳೆದೊಯ್ದ ಮೊಸಳೆಗಳು

11:08 PM Jun 13, 2024 | Team Udayavani |

ಸಿರುಗುಪ್ಪ (ಬಳ್ಳಾರಿ): ತಾಲೂಕಿನಲ್ಲಿ ಹರಿಯುವ ತುಂಗಭದ್ರಾ ನದಿಯಲ್ಲಿ ಮೊಸಳೆಗಳ ಕಾಟ ಹೆಚ್ಚಾಗಿದ್ದು, ತಾಲೂಕಿನ ನಡಿವಿಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಉಡೇಗೋಳಗ್ರಾಮದ ಹತ್ತಿರ ತುಂಗಭದ್ರಾ ನದಿಯಲ್ಲಿ ನೀರು ಕುಡಿಯಲು ಹೋಗಿದ್ದ ಹಸುವನ್ನು ಮೊಸಳೆಗಳ ಗುಂಪು ಎಳೆದೊಯ್ದು ತಿಂದಿವೆ.

Advertisement

ನೀರಿನೊಳಗೆ ಎಳೆದೊಯ್ಯುವ ದೃಶ್ಯವನ್ನು ಸ್ಥಳೀಯರು ಚಿತ್ರೀಕರಿಸಿದ್ದು, ನದಿಯಲ್ಲಿ ಹಸುವನ್ನು ಮೊಸಳೆಗಳು ಎಳೆದಾಡುವ ದೃಶ್ಯ ಮನಕಲುಕುವಂತಿದೆ. ನದಿಯಲ್ಲಿ ಮೊಸಳೆಗಳು ಕಂಡು ಬಂದಿರುವುದರಿಂದ ಸಾರ್ವಜನಿಕರು ನದಿ ದಂಡೆಗೆ ತೆರಳಬಾರದು, ದನ ಕರುಗಳನ್ನು ನದಿ ಕಡೆಗೆ ತೆರಳದಂತೆ ನೋಡಿಕೊಳ್ಳಬೇಕೆಂದು ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳು ಟಾಮ್ ಟಾಮ್ ಮೂಲಕ, ಮೈಕ್ ಮೂಲಕ ಗ್ರಾಮಸ್ಥರಿಗೆ ಮಾಹಿತಿಯನ್ನು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next