Advertisement

ಹಸುಗಳ ಬಲಿ ಆರೋಪ: ತೆಲಂಗಾಣ ಮದ್ರಸಾಕ್ಕೆ ನುಗ್ಗಿ ಜನರಿಂದ ಗಲಾಟೆ

12:53 AM Jun 17, 2024 | Team Udayavani |

ಹೈದರಾಬಾದ್‌: ಬಕ್ರೀದ್‌ ಹಿನ್ನೆಲೆಯಲ್ಲಿ ಹಸುವನ್ನು ಬಲಿ ಕೊಡಲಾಗುತ್ತಿದೆ ಎಂದು ಆರೋಪಿಸಿ ಗುಂಪೊಂದು ಮದ್ರಸಾದ ಮೇಲೆ ದಾಳಿ ನಡೆಸಿದ ಘಟನೆ ತೆಲಂಗಾಣದ ಮೇದಕ್‌ ಜಿಲ್ಲೆಯಲ್ಲಿ ನಡೆದಿದೆ. ನೂರಾರು ಮಂದಿ ಮದ್ರಸಾದೊಳಗೆ ನುಗ್ಗಿ ಹಲ್ಲೆ ನಡೆಸಿದ್ದು, ಹಲವರು ಈ ಘಟನೆಯಲ್ಲಿ ಗಾಯಗೊಂಡಿದ್ದಾರೆ. ಮದ್ರಸಾದ ಹೊರಗಡೆ ಪ್ರತಿಭಟನೆ ನಡೆಸಲಾಗಿದ್ದು, ಇಲ್ಲಿಗೆ ಆಗಮಿಸುತ್ತಿದ್ದ ಬಿಜೆಪಿ ನಾಯಕ ರಾಜಾ ಸಿಂಗ್‌ ಸಹಿತ 7 ಮಂದಿ ಯನ್ನು ಪೊಲೀಸರು ಬಂಧಿಸಿದ್ದಾರೆ. ಮದ್ರಸಾಕ್ಕೆ ಎತ್ತನ್ನು ತರಲಾಗಿತ್ತು. ಅದನ್ನು ಬಲಿ ಕೊಡಲು ತರ ಲಾಗಿದೆ ಎಂದು ಸ್ಥಳೀಯರು ಪ್ರತಿಭಟನೆ ನಡೆಸಿ ದ್ದಾರೆ. ಇದೇ ವೇಳೆ ಒಂದಷ್ಟು ಮಂದಿ ಮದ್ರಸಾ ದೊಳಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next