Advertisement

ಅನುದಾನದ ಹಂಚಿಕೆ ವಿಚಾರ: ಪ.ಪಂ.ಸಭೆಯಲ್ಲಿ ಆಡಳಿತಾಧಿಕಾರಿ, ಸದಸ್ಯರ ನಡುವೆ ಜಟಾಪಟಿ

12:40 PM Jul 02, 2024 | Team Udayavani |

ಸಿರುಗುಪ್ಪ: ತಾಲೂಕಿನ ತೆಕ್ಕಲಕೋಟೆ ಪಟ್ಟಣ ಪಂಚಾಯಿತಿಯಲ್ಲಿ ನಡೆದ ಸರ್ವಸದಸ್ಯರ ಸಭೆಯಲ್ಲಿ ಆಡಳಿತಾಧಿಕಾರಿ ತಹಶೀಲ್ದಾರ್ ಹೆಚ್.ವಿಶ್ವನಾಥ ಮತ್ತು ಪಟ್ಟಣ ಪಂಚಾಯಿತಿ ಸದಸ್ಯರ ನಡುವೆ ಅನುದಾನದ ಹಂಚಿಕೆಯ ವಿಷಯವಾಗಿ ಜಟಾಪಟಿ ನಡೆದು ಬಿಜೆಪಿ ಯ 11 ಜನ ಸದಸ್ಯರು ಹಾಜರಿ ಪುಸ್ತಕಕ್ಕೆ ಸಹಿ ಮಾಡದೆ ಹೊರನಡೆದ ಘಟನೆ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.

Advertisement

ಆಡಳಿತಾಧಿಕಾರಿಯಾದ ತಹಶೀಲ್ದಾರ್ ಹೆಚ್. ವಿಶ್ವನಾಥ ಮಾತನಾಡಿ 2024-25ನೇ ಸಾಲಿನ ಕರ್ನಾಟಕ ವಿಧಾನ ಮಂಡಲದ ಆಯವ್ಯಯದ ಅಧಿವೇಶನದಲ್ಲಿ ಮಂಜೂರು ಮಾಡಿದ ಪ್ರಕಾರ ತೆಕ್ಕಲಕೋಟೆ ಪ.ಪಂ.ಗೆ ೧೫ನೇ ಹಣಕಾಸು ಆಯೋಗದ ಅನುದಾನ ರೂ.3 ಕೋಟಿ ಹಂಚಿಕೆಯಾಗಿದ್ದು, ಸದಸ್ಯರು ತಮ್ಮ ವಾರ್ಡ್ಗಳಲ್ಲಿ ಅವಶ್ಯವಿರುವ ಕಾಮಗಾರಿಗಳನ್ನು ಮುಂದುವರೆಸಲು ಅವಕಾಶವಿರುತ್ತದೆ, ಸದಸ್ಯರು ಇದರ ಬಗ್ಗೆ ಸಲಹೆ ಸೂಚನೆಗಳನ್ನು ನೀಡಬೇಕು.

10.11.2021ರ ಮಾರ್ಗಸೂಚಿ ಪ್ರಕಾರ ಹಿಂದಿನ ಸಾಲಿನ ಅನುದಾನದ ಹಂಚಿಕೆಯಲ್ಲಿ ಪರಿಶೀಲಿಸಿ ಸದಸ್ಯರ ಮನವಿಯನ್ನು ಪರಿಗಣಿಸಿ ಅವಶ್ಯವಿರುವ ವಾರ್ಡ್ಗಳನ್ನು ಆದ್ಯತೆ ಮೇರೆಗೆ ಅವಶ್ಯಕತೆ ಇರುವ ಸ್ಥಳಗಳನ್ನು ಗುರುತಿಸಿ ಸದರಿ ಸ್ಥಳಗಳಿಗೆ ಅನುದಾನವನ್ನು ಹಂಚಿಕೆ ಮಾಡಿ ಕ್ರಿಯಾಯೋಜನೆ ತಯಾರಿಸಿ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗುವುದು ಎಂದು ಹೇಳಿದರು.

ನಮ್ಮ ವಾರ್ಡ್ ಗಳಿಗೆ ಅನುದಾನವನ್ನು ಕೊಡಬೇಕು, ನಮ್ಮನ್ನು ಗೆಲ್ಲಿಸಿದ ಜನರು ನಮಗೆ ಯಾವುದೇ ಅಭಿವೃದ್ಧಿ ಕಾರ್ಯ ಮಾಡುತ್ತಿಲ್ಲವೆಂದು ಮುಖಕ್ಕೆ ಉಗಿಯುತ್ತಿದ್ದಾರೆ. ಆದರೆ ನೀವು ಮಾತ್ರ ವಾರ್ಡ್ ಅಭಿವೃದ್ಧಿಗೆ ಅನುದಾನ ಕೊಡುತ್ತಿಲ್ಲ. ನಾವು ಶಾಲುಹೊದ್ದುಕೊಂಡು ಮಲಗಬೇಕಾ ಎಂದು ಹೇಳಿದ ೮ನೇ ವಾರ್ಡ್ ನ ಸದಸ್ಯ ಹನವಾಳು ಹುಸೇನಿ ತಹಶೀಲ್ದಾರರ ಮುಂದೆ ಧರಣಿ ಕುಳಿತರು. ಇದಕ್ಕೆ ಬೆಂಬಲವಾಗಿ ಬಿಜೆಪಿ ಸದಸ್ಯರು ಕೂಡ ಎದ್ದು ನಿಂತು ಬೆಂಬಲ ವ್ಯಕ್ತಪಡಿಸಿದರು. ಇದರ ನಡುವೆ ಬಿಜೆಪಿ. ಮತ್ತು ಕಾಂಗ್ರೇಸ್ ಸದಸ್ಯರ ನಡುವೆ ಅನುದಾನ ಹಂಚಿಕೆಯ ಚರ್ಚೆ ನಡೆಯಿತು. ಚರ್ಚೆಯ ನಡುವೆ ಮಾತಿನ ಚಕಮಕಿ ನಡೆಯಿತು. ಆಡಳಿತಾಧಿಕಾರಿ ಇಬ್ಬರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು ಇದರಿಂದಾಗಿ ಆಡಳಿತಾಧಿಕಾರಿಯೊಂದಿಗೂ ಸದಸ್ಯರು ವಾಗ್ವಾದ ನಡೆಸಿ ಜಟಾಪಟಿ ನಡೆಯಿತು.

ಆಗ ಕಾಂಗ್ರೇಸ್ ಸದಸ್ಯರು ತಹಶೀಲ್ದಾರರ ಮುಂದೆ ಬಂದು ಹಿಂದಿನ ಸರ್ಕಾರದ ಅವಧಿಯಲ್ಲಿ ಕಾಂಗ್ರೇಸ್ ಸದಸ್ಯರ ವಾರ್ಡ್ಗಳಿಗೆ ಎಷ್ಟು ಅನುದಾನ ಹಾಕಿದೆ, ನಮ್ಮ ಸರ್ಕಾರದ ಅಧಿಕಾರವಧಿಯಲ್ಲಿ ಎಷ್ಟು ಅನುದಾನ ಹಾಕಿದೆ ಎನ್ನುವ ವಿವರವನ್ನು ನೀಡುವಂತೆ ಆಡಳಿತಾಧಿಕಾರಿಯನ್ನು ಒತ್ತಾಯಿಸಿದರು.

Advertisement

ಹಿಂದೆ ವಾರ್ಡ್ಗಳಿಗೆ ಬಿಡುಗಡೆ ಮಾಡಿದ ೫ ವರ್ಷದ ಅನುದಾನದ ಸಂಪೂರ್ಣವಾದ ಮಾಹಿತಿಯನ್ನು ನೀಡಲಾಗುವುದು ಎಂದು ಆಡಳಿತಾಧಿಕಾರಿ ಭರವಸೆ ನೀಡಿದರು.

ನಮ್ಮ ವಾರ್ಡ್ಗಳಿಗೆ ಬೇಕಾದ ಅನುದಾನವನ್ನು ನೀವೆ ನಿರ್ದರಿಸಿ ಹಾಕುವುದಾದರೆ ನಮಗೇನು ಕೆಲಸ ನಾವು ಯಾರು ಸಭೆಯ ಹಾಜರಿ ಪುಸ್ತಕದಲ್ಲಿ ಸಹಿ ಮಾಡುವುದಿಲ್ಲವೆಂದು ಬಿಜೆಪಿಯ 11 ಸದಸ್ಯರು ಸಭೆಯಿಂದ ಹೊರನಡೆದರು.

ವಾರ್ಡ್ ಗಳಲ್ಲಿ ಆದ್ಯತೆ ಮೇರೆಗೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಎಲ್ಲಾ ವಾರ್ಡ್ಗಳಿಗೆ ಖುದ್ದು ತೆರಳಿ ಪರಿಶೀಲನೆ ನಡೆಸಿ ಅಗತ್ಯವಿರುವ ಕಾಮಗಾರಿಗಳಿಗೆ ಅನುದಾನ ನಿಗಧಿಪಡಿಸಿ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗುವುದೆಂದು ಆಡಳಿತಾಧಿಕಾರಿ ವಿಶ್ವನಾಥ ಸಭೆಗೆ ಮಾಹಿತಿ ನೀಡಿದರು.

ಮುಖ್ಯಾಧಿಕಾರಿ ಪರಶುರಾಮ ಮತ್ತು ಪಟ್ಟಣ ಪಂಚಾಯಿತಿ ಸಿಬ್ಬಂದಿ ಇದ್ದರು.

ಇದನ್ನೂ ಓದಿ: Siruguppa: ಐತಿಹಾಸಿಕ ಬೂದಿ ದಿಬ್ಬ ಗುಡ್ಡಕ್ಕೆ ಅಧಿಕಾರಿಗಳ ಭೇಟಿ… ಪರಿಶೀಲನೆ

Advertisement

Udayavani is now on Telegram. Click here to join our channel and stay updated with the latest news.

Next