Advertisement

Sirsi: ದೇಶಾಪಂಡೆ, ಕಾಗೇರಿ ಅವರ ಭಾಷಣ ಶೈಲಿ ಬದಲಾಗಿದೆ ಅಂದಿದ್ದು ಯಾಕೆ?

03:33 PM Sep 14, 2024 | Team Udayavani |

ಶಿರಸಿ: ಸಂಸದೀಯ ರಾಜ್ಯ ಭಾಷಾ ಸಮಿತಿ ಸದಸ್ಯರೂ ಆದ ಸಂಸದ ಕಾಗೇರಿ ಅವರು ಗಣೇಶೋತ್ಸವ, ದೇಶ ಮುಖ್ಯ, ಹಿಂದಿ ಭಾಷಾ, ಮಾತೃ ಭಾಷೆ, ನಮ್ಮ ರಾಷ್ಟ್ರದ ಬಗ್ಗೆ ಸದಾ ಜಾಗೃತಿ ಕುರಿತು ಮಾತನಾಡುತ್ತಿದ್ದಂತೆ ಸ್ಥಳದಲ್ಲೇ ಇದ್ದ  ಆರ್.ವಿ.ದೇಶಪಾಂಡೆ ಅವರು, ಕಾಗೇರಿ ಅವರ ಭಾಷಣ ಬದಲಾಗಿದೆ ಎಂದು ಮಾತು ಆರಂಭಿಸಿದರು.

Advertisement

ಶನಿವಾರ ಅವರು ನಗರದ ಮೋಡರ್ನ್ ಎಜ್ಯುಕೇಶನ್ ಸೊಸೈಟಿಯ ಚೈತನ್ಯ ಪಿಯು ಕಾಲೇಜಿನ ನೂತನ ಕಟ್ಟಡ ಉದ್ಘಾಟನಾ‌ ಸಮಾರಂಭದಲ್ಲಿ ಆರ್.ವಿ.ದೇಶಪಾಂಡೆ ಅವರು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಮಾತಿಗೆ ಚಟಾಕಿ ಹಾರಿಸಿ ನೆರೆದಿದ್ದ ಪ್ರೇಕ್ಷಕರನ್ನು, ವಿದ್ಯಾರ್ಥಿಗಳನ್ನು ನಗೆಗಡಲಲ್ಲಿ ತೇಲಿಸಿದ ಘಟನೆ‌ ನಡೆಯಿತು‌.

ಅವರೀಗ ‌ಸಂಸದರು. ದೇಶದ ಬಗ್ಗೆ ಮಾತನಾಡುತ್ತಿದ್ದಾರೆ, ಸಂತೋಷ, ಬೆಳದಿದ್ದೀರಿ ಎಂದು  ಚಟಾಕಿ ಹಾರಿಸಿದರು.

ಈ ವೇಳೆ ಶಾಸಕ ಭೀಮಣ್ಣ ನಾಯ್ಕ, ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರು, ಎಂಇಎಸ್ ಶಿಕ್ಷಣ ಸಂಸ್ಥೆಯ‌ ಅಧ್ಯಕ್ಷ ಜಿ.ಎಂ.ಮುಳಖಂಡ, ನಿತಿನ್ ಕಾಸರಕೋಡ, ಎಂ.ಜಿ.ಹೆಗಡೆ, ಕೆ.ಬಿ.ಲೋಕೇಶ ಹೆಗಡೆ, ಪ್ರಾಚಾರ್ಯ ರಾಘವೇಂದ್ರ ಹೆಗಡೆಕಟ್ಟೆ ಇತರರು ಇದ್ದರು.

ಇದೇ ವೇಳೆ ದಾನಿಗಳನ್ನು ಗೌರವಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next