Advertisement

Sirsi: ರಾಜ್ಯ ಮಟ್ಟದ ಕೃಷಿ ಸಂಬಂಧಿತ ಪ್ರಶಸ್ತಿ ಪ್ರಕಟ

11:58 AM May 11, 2024 | Team Udayavani |

ಶಿರಸಿ: ಸೋಂದಾ ಸ್ವರ್ಣವಲ್ಲೀ ಮಹಾ‌ಸಂಸ್ಥಾನದ ಕೃಷಿ ಪ್ರತಿಷ್ಠಾ‌ನ ನೀಡುವ ರಾಜ್ಯ ಮಟ್ಟದ ಕೃಷಿ ಸಂಬಂಧಿತ ಪ್ರಶಸ್ತಿಯನ್ನು‌ ಪ್ರಕಟಿಸಲಾಗಿದೆ.

Advertisement

ಉತ್ತಮ ಕೃಷಿಕ (ಕೃಷಿ ಕಂಠೀರವ) ಪ್ರಶಸ್ತಿಯನ್ನು ಯಲ್ಲಾಪುರ ಬಾರೆ‌ ಸಮೀಪದ ವಿಘ್ನೇಶ್ವರ ನಾರಾಯಣ ಭಟ್ಟ ಹೊಸ್ತೋಟ, ಸಾಧಕ ಕೃಷಿ ಮಹಿಳೆ ಪ್ರಶಸ್ತಿಗೆ ಯಲ್ಲಾಪುರ ಸಬಗೇರಿ ಹುತ್ಕಂಡದ ವನಿತಾ ರಾಮಚಂದ್ರ ಭಟ್, ಉತ್ತಮ ಕೃಷಿ ಅವಿಭಕ್ತ ಕುಟುಂಬ‌ ಪ್ರಶಸ್ತಿಯನ್ನು ಹೆಗಡೆಕಟ್ಟ ಹಲಸಿನಕಟ್ಟೆಯ ಎಂ. ವಿ ಹೆಗಡೆ ಕುಟುಂಬಕ್ಕೆ ಪ್ರಕಟಿಸಲಾಗಿದೆ.

ಸಾಧಕ ಕೃಷಿ ಕುಶಲಕರ್ಮಿ ಪ್ರಶಸ್ತಿಯನ್ನು ಸೋಂದಾ‌ ಕೆಶಿನ್ಮನೆಯ ಸುರೇಶ ಮರಾಠಿ ಅವರನ್ನು ಆಯ್ಕೆ‌ ಮಾಡಲಾಗಿದೆ.

ಉತ್ತಮ ಬೆಟ್ಟ ನಿರ್ವಹಣಾ ಪ್ರಥಮ ಪ್ರಶಸ್ತಿಯನ್ನು‌ ಶಿರಸಿ ಹೀಪನಳ್ಳಿ ಅಡೆಮನೆಯ ಪ್ರಕಾಶ ಕೃಷ್ಣ ಭಟ್ಟ ಅವರಿಗೆ, ದ್ವಿತೀಯ ಪ್ರಶಸ್ತಿಯನ್ನು ಸಿದ್ದಾಪುರ ಕೋಡ್ಸರ ಸಂಕದಮನೆ‌ಯ ಪ್ರಶಾಂತ ರಾಮಚಂದ್ರ ಹೆಗಡೆ  ಸಿದ್ದಾಪುರ ಹಾಗೂ ಜೋಯಿಡಾದ ಗುಂದದ ಸುಬ್ರಾಯ ಗಾಂವ್ಕರ್ ಅವರಿಗೆ ಪ್ರದಾನ ಮಾಡಲಾಗುತ್ತಿದೆ.

ಸ್ವರ್ಣವಲ್ಲೀ ಕೃಷಿ ಪ್ರತಿಷ್ಠಾನದ ಸುಬ್ರಾಯ ಹೆಗಡೆ ತ್ಯಾಗಲಿ, ಸಚ್ಚಿದಾನಂದ ಹೆಗಡೆ ಕಲಗದ್ದೆ ಅವರನ್ನೊಳಗೊಂಡ‌ ಸಮಿತಿ ಶ್ರೀಗಳ‌ ಮಾರ್ಗದರ್ಶನದಲ್ಲಿ ಪ್ರಶಸ್ತಿ‌ ಪುರಸ್ಕೃತರನ್ನು ಸ್ಥಳ ಭೇಟಿ‌ ಮಾಡಿ‌ ಆಯ್ಕೆ ಮಾಡಿದೆ.

Advertisement

ಸ್ವರ್ಣವಲ್ಲೀಯಲ್ಲಿ‌ ಮೇ 21ರ ಬೆಳಿಗ್ಗೆ 11 ಗಂಟೆಗೆ ನಡೆಯುವ ಕೃಷಿ ಜಯಂತಿ ಉದ್ಘಾಟ‌ನೆಯ ವೇಳೆ ಅತ್ಯುತ್ತಮ ಬೆಟ್ಟ‌ ನಿರ್ವಹಣಾ ಪ್ರಶಸ್ತಿ ನೀಡಲಾಗುತ್ತಿದೆ.

ಮೇ.22ರ ಸಂಜೆ 4 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಅತ್ಯುತ್ತಮ ಕೃಷಿ ಪ್ರಶಸ್ತಿ‌ ಪ್ರದಾನ ನೀಡಲಾಗುತ್ತಿದೆ ಎಂದು‌  ಕಾರ್ಯಾಧ್ಯಕ್ಷ ಆರ್.ಎನ್.ಹೆಗಡೆ‌ ಉಳ್ಳಿಕೊಪ್ಪ, ಕಾರ್ಯದರ್ಶಿ ಸುರೇಶ‌ ಹಕ್ಕಿಮನೆ ಪ್ರಕಟ‌ನೆಯಲ್ಲಿ‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next