Advertisement

Sirsi: 7 ಲಕ್ಷ ರೂ ಮೋಸ ಹೋಗಿ ಠಾಣೆ ಮೆಟ್ಟಿಲೇರಿದ ಖಾಸಗಿ ಶಾಲೆಯ ಶಿಕ್ಷಕ

11:39 PM Oct 19, 2023 | Team Udayavani |

ಶಿರಸಿ: ಶಿಕ್ಷಕ ಹುದ್ದೆಗೆ ನಂಬಿ ಏಳು ಲಕ್ಷ ರೂ. ಮೋಸ ಹೋದ ಶಿರಸಿಯ ಖಾಸಗಿ ಶಾಲೆಯ ಶಿಕ್ಷಕ ಪ್ರದೀಪ ನಾರಾಯಣ ನಾಯ್ಕ ನ್ಯಾಯ ಒದಗಿಸುವಂತೆ ಮಾರುಕಟ್ಟೆ ಠಾಣೆ ಮೆಟ್ಟಿಲೇರಿದ್ದಾರೆ.

Advertisement

ಶಿರಸಿಯ ಕ್ಷೇತ್ರ  ಶಿಕ್ಷಣಾಧಿಕಾರಿ ಕಚೇರಿಯ ಅಧೀಕ್ಷಕಿ ಪುಷ್ಪಾ ಮಾಜಾಳಿಕರ್ ಹಾಗೂ ಕಾರಾವಾರದ ಶಿವಾಜಿ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯ ನವೀನ ಗಾಂವಕರ್ ಮೋಸ ಮಾಡಿದ ಆರೋಪಿಗಳಾಗಿದ್ದಾರೆ.

ಈ ಅರೋಪಿಗಳು ಕಾರವಾರದ ಹಣಕೋಣ ಸಾಂತೇರಿ ವಿದ್ಯಾಲಯದ ಪ್ರೌಢ ಶಾಲೆಯಲ್ಲಿ ಶಿಕ್ಷಕ ಹುದ್ದೆ ಕೊಡಿಸುವದಾಗಿ ಬರೊಬ್ಬರಿ ಏಳು ಲಕ್ಷ ರೂ ಹಣವನ್ನು ಪ್ರದೀಪರಿಂದ ಪಡೆದಿದ್ದರು ಎನ್ನುವ ದೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ನವೀನ ಖಾತೆಗೆ ಐದು ಲಕ್ಷ ರೂ,,  ಪುಷ್ಪಾ ಕೈಯಲ್ಲಿ ಎರಡು ಲಕ್ಷ ರೂ. ನೀಡಿದ್ದಾರೆ ಎಂದು ದೂರಿ‌ನಲ್ಲಿ ಪ್ರಸ್ತಾಪಿಸಲಾಗಿದೆ. ಪೊಲೀಸರು‌ ತನಿಖೆ ಆರಂಭಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next