Advertisement

ಅರಣ್ಯವಾಸಿಗಳ ಉಳಿಸಿ ಜಾಥ : ಏ. 11ರಂದು ಹುಲೇಕಲ್‌ ನಲ್ಲಿ 300 ನೇ ಗ್ರಾಮ ಭೇಟಿ ಕಾರ್ಯಕ್ರಮ

06:21 PM Apr 07, 2022 | Team Udayavani |

ಶಿರಸಿ: ಅರಣ್ಯವಾಸಿಗಳಿಗೆ ಜಾಗೃತಿ ಮೂಡಿಸುವ ಮತ್ತು ಸರಕಾರದ ಮೇಲೆ ಹೆಚ್ಚಿನ ಒತ್ತಡ ತರುವ ಉದ್ದೇಶದಿಂದ ಜಿಲ್ಲಾದ್ಯಂತ ಹಮ್ಮಿಕೊಂಡ ಅರಣ್ಯವಾಸಿಗಳನ್ನ ಉಳಿಸಿ- ಜಾಥದ ಅಂಗವಾಗಿ 300 ನೇ ಗ್ರಾಮ ಭೇಟಿ ಕಾರ್ಯಕ್ರಮ ಏ. 11 ರಂದು ತಾಲೂಕಿನ ಹುಲೇಕಲ್‌ ನಲ್ಲಿ ಬೆಳಿಗ್ಗೆ 10 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಆರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.

Advertisement

ಫೆ.28 ರಂದು ಕುಮಟ ತಾಲೂಕಿನಿಂದ ಪ್ರಾರಂಭವಾದ ಅರಣ್ಯವಾಸಿಗಳನ್ನ ಉಳಿಸಿ- ಜಾಥ ಜಿಲ್ಲಾದ್ಯಂತ ಸುಮಾರು 2500 ಕೀ.ಮೀ ಸಂಚರಿಸಿ 300 ನೇ ಗ್ರಾಮ ಭೇಟಿ ಇದಾಗಲಿದೆ.

ಹೋರಾಟದ ವಾಹಿನಿ ಮೂಲಕ ಈಗಾಗಲೇ ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ, ಶಿರಸಿ, ಯಲ್ಲಾಪುರ, ಮುಂಡಗೋಡ ತಾಲೂಕಿನಲ್ಲಿ ಅರಣ್ಯವಾಸಿಗಳ ಪ್ರದೇಶಕ್ಕೆ ಭೇಟಿ ನೀಡಿ ಕಾನೂನು ಮಾಹಿತಿ, ಅರಣ್ಯ ಸಿಬ್ಬಂದಿಗಳ ದೌರ್ಜನ್ಯ ಹಾಗೂ ಮೂಲಭೂತ ಹಕ್ಕು ಮಂಜೂರಿಗೆ ಸಂಬಂಧಿಸಿ ಕಾನೂನಾತ್ಮಕ ಅಂಶಗಳ ಕುರಿತು ಜಾಗೃತಿ ಮೂಡಿಸುತ್ತಿದೆ ಎಂದು ಹೇಳಿದರು.

ಆಸಕ್ತ ಅರಣ್ಯವಾಸಿಗಳು ಏ. 11 ರಂದು ಹುಲೇಕಲ್‌ ನಲ್ಲಿ ಜರುಗುವ ಅರಣ್ಯವಾಸಿಗಳನ್ನ ಉಳಿಸಿ- ಜಾಥಕ್ಕೆ ಆಗಮಿಸಲು ಅವರು ಪ್ರಕಟನೆಯಲ್ಲಿ ಕೋರಿದ್ದಾರೆ.

ಇದನ್ನೂ ಓದಿ : ಭಯೋತ್ಪಾದನೆ, ದ್ವೇಷ, ಹಿಂಸಾಚಾರ ಮುಕ್ತ ವಾತಾವರಣ ಪಾಕ್ ನಲ್ಲಿ ಸೃಷ್ಟಿಯಾಗಬೇಕು: ಭಾರತ

Advertisement
Advertisement

Udayavani is now on Telegram. Click here to join our channel and stay updated with the latest news.

Next