Advertisement

ಬನವಾಸಿಯ ಉಮಾಮಧುಕೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಸತೀಶ್ ಜಾರಕಿಹೊಳಿ

09:45 PM Oct 15, 2021 | Team Udayavani |

ಶಿರಸಿ:  ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ್ ಜಾರಕಿಹೊಳಿ ಹಾನಗಲ್ ಚುನಾವಣಾ ಪ್ರಚಾರ ಮುಗಿಸಿ ದಸರಾ ಪ್ರಯುಕ್ತ ಬನವಾಸಿಯ ಉಮಾಮಧುಕೇಶ್ವರ ದೇವಸ್ಥಾನಕ್ಕೆ ಅನಿರೀಕ್ಷಿತ ಭೇಟಿ ನೀಡಿದರು.

Advertisement

ಈ ಸಂಧರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ ಎಫ್ ನಾಯ್ಕ್  ಸ್ವಾಗತಿಸಿದರು. ದೇವಸ್ಥಾನ ಆಡಳಿತ ಮಂಡಳಿಯು  ಜಾರಕಿಹೊಳಿಯವರಿಗೆ ಅಭಿನಂದಿಸಿತು.

ಐತಿಹಾಸಿಕ ಗುಡ್ನಾಪುರ ಕೆರೆ ವೀಕ್ಷಣೆ ಮಾಡಿ ಬಂಗಾರೇಶ್ವರ ದೇವರ ಆಶೀರ್ವಾದ ಪಡೆದು ವಾಪಾಸ್ಸಾದರು.

ಇದನ್ನೂ ಓದಿ:ಜಂಬೂ ಸವಾರಿ ಸಂಪನ್ನದ ಬೆನ್ನಲ್ಲೆ ಮೈಸೂರಿನಲ್ಲಿ ಭಾರೀ ಮಳೆ : ಮನೆಗಳಿಗೆ ನುಗ್ಗಿದ ನೀರು

ಈ ಸಂಧರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಸದಸ್ಯರಾದ ರವಿ ನಾಯ್ಕ್ ಕಲಕರಡಿ, ಶಿವಾಜಿ ಬಿ, ಅಲ್ಪ ಸಂಖ್ಯಾತ ಬ್ಲಾಕ್ ಅಧ್ಯಕ್ಷ ಅಬ್ದುಲ್ ಕರೀಂ,ಮಧುಕೇಶ್ವರ ನಾಯ್ಕ್,ರವಿ ನಾಯ್ಕ್ ಮರಗುಂಡಿ, ಯುವ ಕಾಂಗ್ರೆಸ್ ನ ಆಸೀಫ್, ಗ್ರಾಮ ಪಂಚಾಯತ್ ಸದ್ಯಸ್ಯರಾದ ಅಲ್ತಾಫ್, ಮುದ್ದಣ್ಣ ಬನವಾಸಿ, ರಾಘವೇಂದ್ರ ನಾಯ್ಕ್ ಗುಡ್ನಾಪುರ ಮತ್ತಿತರರು ಉಪಸ್ಥಿತರಿದ್ದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next