Advertisement

Sirsi ; ಗಂಗೆ ಗೆದ್ದ ಗೌರಿ ಇನ್ನು ‘ಜಲ ಗೌರಿ!’: ಸಂಸದರಿಂದ ಸಮ್ಮಾನ

04:12 PM Mar 08, 2024 | Team Udayavani |

ಶಿರಸಿ: ಹಲವು ಅಡೆತಡೆಗಳ‌ ಮಧ್ಯೆ ಅಂಗನವಾಡಿ‌ ಮಕ್ಕಳಿಗೆ ಬಾವಿ ತೋಡಿ ನೀರು ತರಿಸಿದ ಇಲ್ಲಿನ ಗಣೇಶ ನಗರದ ಗೌರಿ ನಾಯ್ಕ ಅವರನ್ನು ಮಹಿಳಾ ದಿನಾಚರಣೆ ದಿನದಂದು ಅವರ ಸ್ವಗೃಹದಲ್ಲಿ ಸಂಸದ ಅನಂತಕುಮಾರ ಹೆಗಡೆ ಸಮ್ಮಾನಿಸಿದರು.

Advertisement

ಬಳಿಕ ಮಾತನಾಡಿದ ಸಂಸದರು, ಯಾರ ಸಹಾಯ ಪಡೆಯದೇ, ಏಕಾಂಗಿಯಾಗಿ, ಏನೇ ತೊಂದರೆ ಬಂದರೂ ಎದುರಿಸಿ ಮಕ್ಕಳಿಗೆ ನೀರು ಕೊಟ್ಟ ಗೌರಿ ನಾಯ್ಕ ಅವರನ್ನು ಜಲ ಗೌರಿ ಎಂದು ಸಮ್ಮಾನಿಸುದಾಗಿ ಹೇಳಿದರು.

ಈ ವೇಳೆ‌ ರೇಖಾ ಹೆಗಡೆ, ಶೋಭಾ ನಾಯ್ಕ, ಉಷಾ ಹೆಗಡೆ, ಗೀತಾ ಮಹಾಲಿಂಗಣ್ಣವರ್, ವೀಣಾ ಶೆಟ್ಟಿ, ರಾಜೇಶ ಶೆಟ್ಟಿ, ಕೃಷ್ಣ ಎಸಳೆ ಇತರರು ಇದ್ದರು. ಬಳಿಕ ಅಂಗನವಾಡಿ ಬಳಿ ತೆರಳಿ ಬಾವಿಯ ಜಲಕ್ಕೂ ಪುಷ್ಪಾರ್ಚನೆ ಮಾಡಿದರು.

ಈ ವೇಳೆ ಪ್ರತಿಕ್ರಿಯೆ ನೀಡಿದ ಗೌರಿ, ಜಿಲ್ಲಾಡಳಿತ ಬಾವಿ ತೋಡಲು ಅವಕಾಶ ನೀಡದೇ ಇದ್ದಾಗ ಧೈರ್ಯ ನೀಡಿ, ಸಮಸ್ಯೆ ಬಗೆಹರಿಸಿದ ಸಂಸದರಿಗೆ ಕೃತಜ್ಞತೆ ‌ಸಲ್ಲಿಸುವುದಾಗಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next