Advertisement

Sirsi:ಕಾರ್ಮಿಕರ ಮೂಲಕ ಮಲ ಸಾಗಿಸಿದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲು

09:21 PM Jan 08, 2024 | Team Udayavani |

ಶಿರಸಿ: ಶೌಚಾಲಯದ ಮಲವನ್ನು ಸ್ಥಳದಿಂದ ಕಾರ್ಮಿಕರ ಮೂಲಕ ಸಾಗಿಸಿದ ಕಟ್ಟಡದ ಮಾಲೀಕನ ವಿರುದ್ಧ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಗರದ ದೇವಿಕೇರಿ ಹತ್ತಿರದ ಗೌಡಳ್ಳಿ ಹೊಟೇಲ್ ಹಿಂಭಾಗ ದಲ್ಲಿರುವ ಹೊಸದಾಗಿ ನಿರ್ಮಿಸುತ್ತಿರುವ ಕಟ್ಟಡವು ಮಹಾಬಲೇಶ್ವರ ಬಿ.ಬೈಂದೂರು ಮಾಲಕತ್ವದ್ದಾಗಿದ್ದು, ಅವರು ತಮ್ಮ ಕಟ್ಟಡವನ್ನು ನಿರ್ಮಿಸಲು ಬಂದ ಕಾರ್ಮಿಕರನ್ನು ಬಳಸಿಕೊಂಡು ಸ್ಥಳದಲ್ಲಿರುವ ತಮ್ಮ ಹಳೆಯ ಶೌಚಾಲಯದ ಗುಂಡಿಯನ್ನು ಜ. 4 ರಂದು ಬೆಳಗ್ಗೆ 11 ಗಂಟೆಯ ಸುಮಾರಿಗೆ ಸ್ವಚ್ಛಗೊಳಿಸಿದ ಕುರಿತು ಆ ವೇಳೆ ಸ್ಥಳದಲ್ಲಿದ್ದ ಬಲ್ಲ ಸಾರ್ವಜನಿಕರಿಂದ ತಿಳಿದು ಬಂದಿದೆ.

Advertisement

ಜ.8 ರಂದು ಬೆಳಗ್ಗೆ 10.45 ಕ್ಕೆ ಸ್ಥಳಕ್ಕೆ ತೆರಳಿ ಪರಿಶೀಸಿದಾಗ ಆ ಸ್ಥಳದಲ್ಲಿ ಶೌಚಾಲಯದ ಗುಂಡಿ ಇರುವುದು ಹಾಗೂ ಅದರಲ್ಲಿರುವ ಶೌಚಾಲಯದ ಮಲವನ್ನು ಸ್ಥಳದಿಂದ ಕಾರ್ಮಿಕರ ಮೂಲಕ ಸಾಗಿಸಿರುವುದು ಮತ್ತು ಆ ಸ್ಥಳದ ಅಕ್ಕಪಕ್ಕದಲ್ಲಿ ಬಿದ್ದಿದ್ದ ಮಲದ ಕುರುಹುಗಳಿಂದ ಸ್ಪಷ್ಟವಾಗಿ ಕಂಡು ಬಂದಿದೆ. ಈ ಹಿನ್ನಲೆಯಲ್ಲಿ ಕಟ್ಟಡದ ಮಾಲೀಕ ಪಡ್ತಿಗಲ್ಲಿಯ ಮಹಾಬಲೇಶ್ವರ ಬಿ ಬೈಂದೂರು (60) ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನಗರಸಭೆಯ ಹಿರಿಯ ಆರೋಗ್ಯ ನಿರೀಕ್ಷಕ ರಾಮಚಂದ್ರ ಮಂಜುನಾಥ ವೆರ್ಣೀಕರ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪಿಎಸ್.ಐ ರತ್ನಾ ಕುರಿ ತನಿಖೆ ನಡೆಸಿದ್ದಾರೆ.
ಮಲ ಹೊರುವ ಪದ್ಧತಿಗೆ ನಿಷೇಧವಿದ್ದರೂ ಶಿರಸಿಯಲ್ಲಿ ಇದು ಬೆಳಕಿಗೆ ಬಂದಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next