Advertisement
ಜ.8 ರಂದು ಬೆಳಗ್ಗೆ 10.45 ಕ್ಕೆ ಸ್ಥಳಕ್ಕೆ ತೆರಳಿ ಪರಿಶೀಸಿದಾಗ ಆ ಸ್ಥಳದಲ್ಲಿ ಶೌಚಾಲಯದ ಗುಂಡಿ ಇರುವುದು ಹಾಗೂ ಅದರಲ್ಲಿರುವ ಶೌಚಾಲಯದ ಮಲವನ್ನು ಸ್ಥಳದಿಂದ ಕಾರ್ಮಿಕರ ಮೂಲಕ ಸಾಗಿಸಿರುವುದು ಮತ್ತು ಆ ಸ್ಥಳದ ಅಕ್ಕಪಕ್ಕದಲ್ಲಿ ಬಿದ್ದಿದ್ದ ಮಲದ ಕುರುಹುಗಳಿಂದ ಸ್ಪಷ್ಟವಾಗಿ ಕಂಡು ಬಂದಿದೆ. ಈ ಹಿನ್ನಲೆಯಲ್ಲಿ ಕಟ್ಟಡದ ಮಾಲೀಕ ಪಡ್ತಿಗಲ್ಲಿಯ ಮಹಾಬಲೇಶ್ವರ ಬಿ ಬೈಂದೂರು (60) ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನಗರಸಭೆಯ ಹಿರಿಯ ಆರೋಗ್ಯ ನಿರೀಕ್ಷಕ ರಾಮಚಂದ್ರ ಮಂಜುನಾಥ ವೆರ್ಣೀಕರ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪಿಎಸ್.ಐ ರತ್ನಾ ಕುರಿ ತನಿಖೆ ನಡೆಸಿದ್ದಾರೆ.ಮಲ ಹೊರುವ ಪದ್ಧತಿಗೆ ನಿಷೇಧವಿದ್ದರೂ ಶಿರಸಿಯಲ್ಲಿ ಇದು ಬೆಳಕಿಗೆ ಬಂದಂತಾಗಿದೆ.