Advertisement

ಶಿರೂರು ಭೀಕರ ಅಪಘಾತ: ಕಾರು -ಲಾರಿ ಢಿಕ್ಕಿ: ಓರ್ವ ಸ್ಥಳದಲ್ಲೇ ಸಾವು

10:14 AM Oct 18, 2019 | sudhir |

ಬೈಂದೂರು: ಲಾರಿ ಹಾಗೂ ಕಾರು ಮುಖಾಮುಖೀ ಢಿಕ್ಕಿ ಹೊಡೆದು ಕಾರಿನ ಚಾಲಕ ಸ್ಥಳದಲ್ಲೆ ಸಾವನ್ನಪ್ಪಿ, ಮತ್ತೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ಶಿರೂರು ಸಮೀಪದ ಸಂಕದಗುಂಡಿ ಸೇತುವೆ ಬಳಿ ನಡೆದಿದೆ.

Advertisement

ವಂಡ್ಸೆ ನಿವಾಸಿ ನಿತೇಶ್‌ ಮೊಗವೀರ (23) ಮೃತಪಟ್ಟವರು. ಗಂಭೀರ ಗಾಯಗೊಂಡಿರುವ ಸಂತೋಷ ಶೆಟ್ಟಿ (20 )ಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಢಿಕ್ಕಿಯಾದ ರಭಸಕ್ಕೆ ಕಾರು ಚಲಾಯಿಸತ್ತಿದ್ದ ನಿತೇಶ್‌ನ ತಲೆಭಾಗ ಎದುರಿಗೆ ಬಡಿದು ಛಿದ್ರವಾಗಿದೆ.ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಮೃತದೇಹವನ್ನು ಹೊರತೆಗೆಯಲು ಸ್ಥಳೀಯರು ಹರಸಾಹಸಪಟ್ಟರು.
ಪೂಜೆಗೆಂದು ಬರುತ್ತಿದ್ದರು

ನಿತೇಶ ಒಂದು ವರ್ಷದಿಂದ ಬಾಗಲಕೋಟೆಯಲ್ಲಿ ಹೊಟೇಲ್‌ ನಡೆಸುತ್ತಿದ್ದು, ಮನೆಯಲ್ಲಿ ಪೂಜೆ ಇದ್ದ ಕಾರಣ ಊರಿಗೆ ಬರುತಿದ್ದರು. ಈ ಸಮಯದಲ್ಲಿ ಸ್ನೇಹಿತ ಸಂತೋಷ ಶೆಟ್ಟಿ ಕೂಡ ಜತೆಯಲ್ಲಿ ಹೊರಟಿದ್ದರು. ಸಂಜೆ ವೇಳೆಗೆ ವಿಪರೀತ ಮಳೆ ಬಂದ ಕಾರಣ ತಿರುವಿನಲ್ಲಿ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ.

ಸೇತುವೆ ರಿಪೇರಿ ಮಾಡುತ್ತಿರುವ ಕಾರಣ ಬಲಬದಿಯ ರಸ್ತೆಯನ್ನು ಎರಡು ದಿನಗಳ ಹಿಂದೆ ಸಂಚಾರಕ್ಕೆ ಬಿಟ್ಟು ಕೊಡಲಾಗಿತ್ತು. ಈ ತಿರುವು ಅತ್ಯಂತ ಅಪಾಯಕಾರಿಯಾಗಿದ್ದು, ಇಲ್ಲಿ ಹಲವು ಅಪಘಾತಗಳು ಸಂಭವಿಸಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next