Advertisement

ಶಿರಸಿ: 10 ಗ್ರಾಂ ಚಿನ್ನಾಭರಣ ಮಾಲಕನಿಗೆ ಮರಳಿಸಿ ಆಟೋ ಚಾಲಕನ ಪ್ರಾಮಾಣಿಕತೆ

03:51 PM Jul 15, 2022 | Team Udayavani |

ಶಿರಸಿ: ಆಟೋ ರಿಕ್ಷಾದಲ್ಲಿ ಸಂಚಾರ ‌ಮಾಡುವಾಗ ಪ್ರಯಾಣಿಕರೋರ್ವರು ಕಳೆದುಕೊಂಡ 10 ಗ್ರಾಂ ತೂಕದ ಬ್ರೇಸ್ ಲೆಟ್ ನ್ನು‌ ಅಟೋ ಚಾಲಕ ಪ್ರಾಮಾಣಿಕವಾಗಿ‌ ಮಾಲಕನ ಕೈಗೆ ಒಪ್ಪಿಸಿದ ಘಟನೆ ಶುಕ್ರವಾರ ನಡೆದಿದೆ.

Advertisement

ಅಟೋ ಚಾಲಕ ಗಾಂಧಿನಗರದ ನಿವಾಸಿ ಭಾಸ್ಕರ ಮೊಗೇರ ಅವರ ಆಟೋದಲ್ಲಿ ಭಟ್ಕಳ ಮೂಲದ ದೇವೇಂದ್ರ ನಾಯ್ಕ ಇವರು ಚಿನ್ನದ ಬ್ರೇಸ್ ಲೆಟ್ ಮಾರಿಕಾಂಬಾ ದೇವಸ್ಥಾನದ ಎದುರುಗಡೆಯಲ್ಲಿ ಕಳೆದು ಕೊಂಡಿದ್ದರು.

ಆಟೋ ಚಾಲಕ ಭಾಸ್ಕರ ಮೊಗೇರ ಅವರ ಗಮನಕ್ಕೆ ಇದು ಬಂದಾಗ ಪ್ರಮಾಣಿಕತೆಯಿಂದ ಮರಳಿ ತಂದು ಕೊಟ್ಟಿದ್ದು, ಚಿನ್ನದ ಬ್ರೇಸ್ ಲೆಟನ್ನು ದೇವೇಂದ್ರ ನಾಯ್ಕ ಅವರಿಗೆ ಪೊಲೀಸರ ಸಮಕ್ಷಮ ಹಿಂದಿರುಗಿಸಲಾಯಿತು. ಶಿರಸಿಯಲ್ಲಿ ಅಟೋ‌ ಚಾಲಕನ ಪ್ರಾಮಾಣಿಕತೆಗೆ ಪ್ರಶಂಸೆ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next