Advertisement

Election: ಕೋವಿಂದ್‌ ನೇತೃತ್ವದಲ್ಲಿ ಏಕ ಚುನಾವಣೆ ಸಮಿತಿ ಸಭೆ

12:00 AM Sep 07, 2023 | Team Udayavani |

ಹೊಸದಿಲ್ಲಿ: “ಒಂದು ದೇಶ; ಒಂದು ಚುನಾವಣೆ’ ವ್ಯವಸ್ಥೆ ಜಾರಿ ಬಗ್ಗೆ ಪರಿಶೀಲನೆಗೆ ರಚನೆ ಮಾಡಲಾಗಿ ರುವ ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ನೇತೃತ್ವದ ಸಮಿತಿಯ ಸಭೆ ಹೊಸದಿಲ್ಲಿಯಲ್ಲಿ ನಡೆ ಯಿತು. ಕೇಂದ್ರ ಸರಕಾರ ಸಮಿತಿಯ ಸದಸ್ಯರನ್ನು ಘೋಷಣೆ ಮಾಡಿದ ಬಳಿಕ ನಡೆದ ಮೊದಲ ಸಭೆ ಇದಾಗಿದೆ.

Advertisement

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್‌ ಶಾ, ಕಾನೂನು ಸಚಿವ ಅರ್ಜುನ್‌ ರಾಮ್‌ ಮೇಘ್ವಾಲ್‌, ಕೋವಿಂದ್‌ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದ್ದಾರೆ. ಒಂದು ಗಂಟೆ ಕಾಲ ಸಭೆ ನಡೆಸಲಾಗಿದೆ. ಈ ಬಗ್ಗೆ ಹೆಚ್ಚಿನ ವಿವರಗಳು ಲಭ್ಯ ವಾಗಿಲ್ಲ ಎಂದು ಮೂಲ ಗಳು ತಿಳಿಸಿವೆ. ಮುಂದಿನ ದಿನಗಳಲ್ಲಿ ಹೈಬ್ರಿಡ್‌ ಮಾದರಿಯಲ್ಲಿ ಕೂಡ ಸಭೆ ನಡೆಯುವ ಸಾಧ್ಯತೆಗಳು ಇವೆ.

Advertisement

Udayavani is now on Telegram. Click here to join our channel and stay updated with the latest news.

Next