Advertisement

ಸರಳವಾಗಿ ವಿವಾಹವಾದ ಶಿಕಕ್ಷ

04:52 AM May 14, 2020 | Suhan S |

ಗದಗ: ಕೋವಿಡ್ ತಡೆಗಾಗಿ ಲಾಕ್‌ಡೌನ್‌ ಜಾರಿಯಲ್ಲಿರುವುದರಿಂದ ತಾಲೂಕಿನ ಬೆನಕೊಪ್ಪ ಗ್ರಾಮದ ಶಾಲಾ ಶಿಕ್ಷಕ ನಾಗರಾಜ ಕಮ್ಮಾರ ಅವರು ಬುಧವಾರ ನಗರದ ಹುಡ್ಕೊ ಕಾಲೋನಿಯ ತಮ್ಮ ನಿವಾಸದಲ್ಲಿ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

Advertisement

ಗುರು-ಹಿರಿಯರು ಹಾಗೂ ಬಂಧುಗಳ ಸಮ್ಮುಖದಲ್ಲಿ ನಾಗರಾಜ ಅವರು ಹುಬ್ಬಳ್ಳಿಯ ನವನಗರ ನಿವಾಸಿ ಗಂಗಾಧರ ಕಮ್ಮಾರ ಅವರ ಪುತ್ರಿ ಗಾಯತ್ರಿ ಅವರನ್ನು ವರಿಸಿದರು. ಜಿಲ್ಲಾಡಳಿತ 50 ಜನರಿಗೆ ಪರವಾನಗಿ ನೀಡಿದ್ದರೂ, 45 ಜನರು ಮಾತ್ರ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ವಧು-ವರ ಸೇರಿದಂತೆ ಎಲ್ಲರೂ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡರು. ಮದುವೆ ಸಮಾರಂಭದಲ್ಲಿ ಜಿಲ್ಲಾ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘ ಅಧ್ಯಕ್ಷ ರಾಜಗೋಪಾಲ ಕಡ್ಲಿಕೊಪ್ಪ, ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಕಮ್ಮಾರ, ಶಿಕ್ಷಕರಾದ ಸುಭಾಷ ಕಮ್ಮಾರ ಹಾಗೂ ಬಂಧು-ಬಳಗ ಪಾಲ್ಗೊಂಡು, ನವದಂಪತಿಯನ್ನು ಆಶೀರ್ವದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next