Advertisement

ಸಿದ್ದು ಸವದಿ ನಾಮಪತ್ರ ಸಲ್ಲಿಕೆ: ರಬಕವಿ-ಬನಹಟ್ಟಿಗೆ ಹರಿದು ಬಂದ ಜನಸಾಗರ

08:31 PM Apr 20, 2023 | Team Udayavani |

ರಬಕವಿ-ಬನಹಟ್ಟಿ: ತೇರದಾಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಹಾಲಿ ಶಾಸಕ ಸಿದ್ದು ಸವದಿ ಅವರು ನಾಮಪತ್ರ ಸಲ್ಲಿಸುವದಕ್ಕೂ ಮೊದಲು ಮುಂಜಾನೆ ರಬಕವಿಯ ಬಸ್ ನಿಲ್ದಾಣದಿಂದ ಸುಮಾರು ೨ ಕಿ.ಮೀನಷ್ಟು ಅದ್ದೂರಿ ರೋಡ್ ಶೋ ನಡೆಸಿ ಎತ್ತಿನ ಬಂಡಿಯ ಮೂಲಕ ಸಾವಿರಾರು ಕಾರ್ಯಕರ್ತರೊಂದಿಗೆ ರಬಕವಿ-ಬನಹಟ್ಟಿ ತಹಶೀಲ್ದಾರ ಕಛೇರಿಯಲ್ಲಿನ ಚುನಾವಣೆ ಕಾರ್ಯಾಲಯಕ್ಕೆ ಆಗಮಿಸಿ ಚುನಾವಣಾಧಿಕಾರಿ ಡಾ. ಶಶಿಧರ ನಾಡಗೌಡ ಅವರಿಗೆ ನಾಮಪತ್ರ ಸಲ್ಲಿಸಿದರು.

Advertisement

ನಾಮ ಪತ್ರ ಸಲ್ಲಕೆಯ ನಿಮಿತ್ತ ಗುರುವಾರ ಬೆಳಿಗ್ಗೆ ಕಾಡಸಿದ್ಧೇಶ್ವರ, ಮಲ್ಲಿಕಾರ್ಜುನ ದೇವರು ಸೇರಿದಂತೆ ವಿವಿಧ ದೇವಸ್ಥಾನಗಳಿಗೆ ಪೂಜೆಗೈದು ರಬಕವಿಯ ಬಸ್ ನಿಲ್ದಾಣದಿಂದ ಬೃಹತ್ ಮೆರವಣಿಗೆ ಮೂಲಕ ದಾನಮ್ಮದೇವಿ ದೇವಸ್ಥಾನ, ಹಳೇ ಬಸ್ ನಿಲ್ದಾಣ, ಶಂಕರಲಿಂಗ ದೇವಸ್ಥಾನ, ಶ್ರೀನಿವಾಸ ಚಿತ್ರ ಮಂದಿರ, ರಾಮಪುರ ರಾಮದೇವರ ಮಂದಿರ, ನಗರಸಭೆ ಕಾರ್ಯಾಲಯ, ಪೊಲಿಸ್ ಠಾಣೆ ಮಾರ್ಗವಾಗಿ ರೋಡ್ ಶೋ ಮೂಲಕ ಚುನಾವಣೆ ಅಧಿಕಾರಿಗಳಿಗೆ ತಮ್ಮ ನಾಮ ಪತ್ರ ಸಲ್ಲಿಸಿದರು.

ಮೆರವಣಿಗೆಯಲ್ಲಿ ಬಿಜೆಪಿ ಅಭ್ಯರ್ಥಿ ಹಾಲಿ ಶಾಸಕ ಸಿದ್ದು ಸವದಿ ಎತ್ತಿನ ಬಂಡಿ ಮೂಲಕ ರೋಡ್ ಶೋ ನಡೆಸಿ ಮತದಾರರತ್ತ ಕೈ ಬೀಸಿದರು. ಇಪ್ಪತ್ತೈದು ಸಾವಿರಕ್ಕೂ ಹೆಚ್ಚು ಜನರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಮೆರವಣಿಗೆಯಲ್ಲಿ ಭಾಗವಹಿಸಿದ್ದ ಜನರು ಬಿಸಿಲಿನ ತಾಪಕ್ಕೆ ಬಸವಳಿದರು. ಗಿಡಮರ ಮತ್ತು ಕಟ್ಟಡಗಳ ನೆರಳಿನಲ್ಲಿ ಜನರು ತಂಡತಂಡವಾಗಿ ನಿಂತಿದ್ದರು. ಸಂಘಟಕರು ಸಾಕಷ್ಟು ನೀರಿನ ಸೌಲಭ್ಯ ಒದಗಿಸಿದ್ದರು. ಸ್ಥಳೀಯ ಪೊಲೀಸ್ ವೃತ್ತದ ಬಳಿಯಿರುವ ಸುತ್ತ ಮುತ್ತಲಿನ ಅಂಗಡಿಗಳಲ್ಲಿ ನೀರಿನ ಬಾಟಲಗಳು, ತಂಪು ಪಾನೀಯಗಳಿಗೆ ಭಾರಿ ಬೇಡಿಕೆ ಇತ್ತು. ಕಬ್ಜಿನ ಹಾಲಿನ ಮಾರಾಟ ಜೋರಾಗಿತ್ತು.

ಈ ಸಂದರ್ಭದಲ್ಲಿ ಸಂಸದ ಕೆ. ನಾರಾಯಣಸ್ವಾಮಿ, ಧರೆಪ್ಪ ಉಳ್ಳಾಗಡ್ಡಿ, ನಾಡೋಜ ಜಗದೀಶ ಗುಡಗುಂಟಿ, ಬಸವರಾಜ ಕೊಣ್ಣೂರ, ಬಸನಗೌಡ ಪಾಟೀಲ, ಗಣಪತರಾವ ಹಜಾರೆ, ಶ್ರೀಶೈಲ ಬೀಳಗಿ, ಪುಂಡಲಿಕ ಪಾಲಬಾಂವಿ, ಸುರೇಶ ಅಕ್ಕಿವಾಟ, ಆನಂದ ಕಂಪು, ಲಕ್ಕಪ್ಪ ಪಾಟೀಲ, ಸಂಜಯ ತೆಗ್ಗಿ, ಅಶೋಕ ರಾವಳ, ಮೋಹನ ಜಾಧವ, ಜಿ. ಎಸ್. ನ್ಯಾಮಗೌಡ, ಮಹಾಂತೇಶ ಹಿಟ್ಟನಮಠ, ಡಾ.ಎಸ್.ಎಸ್.ಹೂಲಿ, ದುಂಡಪ್ಪ ಮಾಚಕನೂರ, ಸಿದ್ದನಗೌಡ ಪಾಟೀಲ, ಬಸವರಾಜ ತೆಗ್ಗಿ, ಸುರೇಶ ಚಿಂಡಕ, ಬಾಬಾಗೌಡ ಪಾಟೀಲ, ಜಿ.ಎಸ್.ಗೊಂಬಿ, ಪ್ರಭಾಕರ ಮೊಳೇದ, ಶಿವಾನಂದ ಬುದ್ನಿ, ಗಟ್ಟು ಮಾಲಪಾಣಿ, ಶ್ರೀಶೈಲ ಯಾದವಾಡ, ಶಿವಾನಂದ ಕಾಗಿ, ಈಶ್ವರ ಪಾಟೀಲ, ವರ್ಧಮಾನ ಕೋರಿ, ಅಶೋಕ ರಾವಳ, ಈರಣ್ಣ ಚಿಂಚಖಂಡಿ, ಶಿವು ಗುಂಡಿ, ಭೀಮಶಿ ಪಾಟೀಲ, ಆನಂದ ಬಾಡಗಂಡಿ, ಶ್ರೀಶೈಲ ಗಸ್ತಿ, ಸದಾಶಿವ ಪರೀಟ, ಶ್ರೀಶೈಲ ಬೀಳಗಿ, ಶಂಕರ ಅಂಗಡಿ, ಗೋವಿಂದ ಡಾಗಾ, ಬಾಳಯ್ಯ ಪೂಜಾರಿ, ಚಿದಾನಂದ ಹೊರಟ್ಟಿ, ಲಿಂಗರಾಜ ನಾಯಕ, ಸದಾಶಿವ ದೆಸಟ್ಟಿ, ಪ್ರವೀಣ ಧಬಾಡಿ, ಮಲ್ಲು ಬೀಳಗಿ, ಜಯವಂತ ಹಳ್ಯಾಳ, ಶ್ರೀಧರ ಸುಣಧೋಳಿಮಠ, ರವಿ ದೇವಾಡಿಗ ಸೇರಿದಂತೆ ಅನೇಕರು ಇದ್ದರು.

Advertisement

ಇದನ್ನೂ ಓದಿ: Gangavati: ನಿಯಮ ಉಲ್ಲಂಘಿಸಿದ ರಸಗೊಬ್ಬರ ಅಂಗಡಿಗಳ ಪರವಾನಿಗೆ ರದ್ದು

Advertisement

Udayavani is now on Telegram. Click here to join our channel and stay updated with the latest news.

Next