Advertisement

ಸಚಿವರಿದ್ದಾಗ ನೇಕಾರರಿಗೆ ನೀವೇನು ಮಾಡಿದ್ದೀರಿ ? ಉಮಾಶ್ರೀ ವಿರುದ್ಧ ಹರಿಹಾಯ್ದ ಶಾಸಕ ಸವದಿ

06:39 PM Jun 04, 2021 | Team Udayavani |

ಬನಹಟ್ಟಿ : ಕೊರೊನಾಗೆ ಹೆದರಿ ಬೆಂಗಳೂರಿನ ಮನೆಯಲ್ಲಿ ಕುಳಿತು ಅದ್ಹೇಗೆ ನೇಕಾರರ ಪರ ಕಾಳಜಿ ವಹಿಸಿದ್ದೀರಿ? ನೇಕಾರರ ಕಾರ್ಯ ಮಾಡಿದ್ದೀರಿ? ಸಚಿವರಿದ್ದಾಗಲೇ ಏನು ಮಾಡದ ನೀವು, ಈಗ ಹೇಗೆ ಮಾಡುತ್ತೀರಿ, ಇಂತಹ ತೀವ್ರ ಸಂಕಷ್ಟದ ಸಮಯದಲ್ಲಿ ಮಾಡಿದ್ದಾದರೂ ಏನು? ನಿಮ್ಮ ಹಣೆಬರಹ ಜನತೆಗೆ ಗೊತ್ತಿದೆ ಎಂದು ಮಾಜಿ ಸಚಿವೆ ಉಮಾಶ್ರೀ ವಿರುದ್ಧ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ, ತೇರದಾಳ ಶಾಸಕ ಸಿದ್ದು ಸವದಿ ಹರಿಹಾಯ್ದಿದ್ದಾರೆ.

Advertisement

ಶುಕ್ರವಾರ ಬನಹಟ್ಟಿಯಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು. ಅಧಿವೇಶನದಲ್ಲಿಯೂ ಆಡಳಿತ ಸರ್ಕಾರವಿದ್ದರೂ ನೇಕಾರರಿಗೆ ಅನ್ಯಾಯವಾದ ಸಂದರ್ಭದಲ್ಲಿ ನಮ್ಮದೇ ಸರಕಾರವಿದ್ದರೂ ಸರಕಾರದ ನಿರ್ಲಕ್ಷತನವನ್ನು ಖಂಡಿಸಿ ಸಭೆಯ ಗಮನ ಸೆಳೆದಿದ್ದೇನೆ. ಸಮುದಾಯಕ್ಕೆ ಅನ್ಯಾಯವಾದರೆ ಸಹಿಸೋಲ್ಲ. ಇದೀಗ ಮುಖ್ಯಮಂತ್ರಿಯವರೊಂದಿಗೆ ಸಾಕಷ್ಟು ಬಾರಿ ಮನವಿ ಮಾಡಿಕೊಂಡು ಡಿಸಿಎಂ ಗೋವಿಂದ ಕಾರಜೋಳರೊಂದಿಗೆ ಮಾತುಕತೆ ಮೂಲಕ ಪ್ರತಿ ನೇಕಾರನಿಗೆ 3 ಸಾವಿರ ರೂ. ಸಹಾಯ ಧನ ಒದಗಿಸಿದ್ದೇನೆ. ಅದರೆ ಅದನ್ನು ನಾವೇ ಮಾಡಿಸಿದ್ದು ಎಂದು ಪೊಳ್ಳು ಹೇಳಿಕೆ ನೀಡುತ್ತಿರುವ ಉಮಾಶ್ರೀಯವರ ಕ್ರಮ ಖಂಡನೆ ಎಂದರು.

ಕ್ಷೇತ್ರದಲ್ಲಿ ನೇಕಾರರ ಸೇವಾ ಕಾರ್ಯ ಮಾಡುತ್ತೇವೆ. ಮಾನವೀಯತೆ ದೃಷ್ಠಿಯಿಂದ ದೇವರು ಮೆಚ್ಚುವಂತಹ ಕೆಲಸ ಮಾಡುತ್ತೇವೆ. ಕೈಮಗ್ಗ ನೇಕಾರ ಪರಸ್ಥಿತಿ ಗಂಭಿರವಾಗಿದೆ ಅವರಿಗೆ 2 ಸಾವಿರ ಕೊಟ್ಟಿದ್ದು ನಮಗೆ ಸಮಾಧಾನವಿಲ್ಲ. ಆದರೆ ಕೋವಿಡ್ ಸಂಕಷ್ಟದಲ್ಲಿ ಸರಕಾರದ ಸ್ಥಿತಿ ಗಂಭಿರವಾಗಿದೆ. ಆ ನಿಟ್ಟಿನಲ್ಲಿ ಸುಮ್ಮನಿದ್ದೇವೆ. ಎಲ್ಲ ನೇಕಾರರಿಗೆ ಕನಿಷ್ಠ 5 ಸಾವಿರ ನೀಡಬೇಕು ಎನ್ನುವುದು ನಮ್ಮ ಬೇಡಿಕೆ ಬಹುದಿನಗಳಿಂದ ಇದೆ ಎಂದರು.

ಇದನ್ನೂ ಓದಿ :ಗೋವಾ : ಜುಲೈ 31ರೊಳಗೆ ರಾಜ್ಯದ 18 ವರ್ಷ ಮೇಲ್ಪಟ್ಟವರಿಗೆಲ್ಲರಿಗೂ ಲಸಿಕೆ : ಸಾವಂತ್  

ಸಾಲಮನ್ನಾಕ್ಕೆ ನೇಕಾರರ ಮುಂಗಡ ಸಾಲ(ಕ್ಯಾಶ್ ಕ್ರೆಡಿಟ್)ದವರಿಗೂ ಶೀಘ್ರವೇ 1 ಲಕ್ಷ ರೂ.ದಷ್ಟು ಸಾಲ ಮನ್ನಾ ಕಾರ್ಯ ನಡೆಯುತ್ತಿದೆ. ನೇಕಾರರಲ್ಲಿ ಯಾವದೇ ಅನುಮಾನಬೇಡ ಈ ಕುರಿತು ಶೀಘ್ರವಾಗಿ ಬೆಂಗಳೂರಿಗೆ ತೆರಳಿ ಮಾನ್ಯ ಮುಖ್ಯಮಂತ್ರಿಗಳ ಜೊತೆ ಹಾಗೂ ಇಲಾಖೆಯ ಕಾರ್ಯದರ್ಶಿಯವರ ಜೊತೆ ಮಾತನಾಡಿ ಆದಷ್ಟು ಬೇಗನೆ ಇತ್ಯರ್ಥ ಪಡಿಸುವುದಾಗಿ ತಿಳಿಸಿದರು.

Advertisement

ಶಾಸಕರ ನಿಧಿ ಆರೋಗ್ಯ ಕ್ಷೇತ್ರಕ್ಕೆ ಮೀಸಲು : ನಮಗೆ ಬಂದಿರುವ 50 ಲಕ್ಷ ಶಾಸಕರ ನಿಧಿ ಕ್ಷೇತ್ರದ ಆರೋಗ್ಯ ಕ್ಷೇತ್ರಕ್ಕೆ ಮೀಸಲಿಟ್ಟಿದ್ದು, ಕ್ಷೇತ್ರದಲ್ಲಿನ ರಬಕವಿ-ಬನಹಟ್ಟಿ, ಮಹಾಳಿಂಗಪೂರ, ತೇರದಾಳದಲ್ಲಿನ ಆಸ್ಪತ್ರೆಗಳಲ್ಲಿನ ಮೂಲಭೂತ ಸೌಲಭ್ಯ ಅಭಿವೃದ್ಧಿ ಪಡಿಸಲು ಹಣ ಬಳಸುವುದಾಗಿ ಶಾಸಕ ಸವದಿ ತಿಳಿಸಿದರು.

ರಬಕವಿ-ಬನಹಟ್ಟಿ ನಗರಾಧ್ಯಕ್ಷ ಶ್ರೀಶೈಲ ಬೀಳಗಿ ಮಾತನಾಡಿ, ನೀಚ ಹಾಗೂ ನಾಲಾಯಕ ರಾಜಕೀಯ ನಡೆಸುತ್ತಿರುವ ಕಾಂಗ್ರೆಸ್ ಕೊರೊನಾ ಸಂದಿಗ್ಧ ಪರಿಸ್ಥಿತಿಯಲ್ಲಾದರೂ ಪ್ರಾಮಾಣಿಕವಾಗಿ ಸಾರ್ವಜನಿಕರ ಸಹಾಯಕ್ಕೆ ಬರಲಿ ಬದಲಾಗಿ ಅಪಪ್ರಚಾರ ನಡೆಸುತ್ತಿರುವದು ನಿಜಕ್ಕೂ ಬೇಸರ ತರುವಂಥದ್ದು ಎಂದರು.

ಈ ಸಂದರ್ಭ ಶ್ರೀಶೈಲ ದಭಾಡಿ, ಸಿದ್ಧನಗೌಡ ಪಾಟೀಲ, ಜಿಲ್ಲಾ ಉಪಾಧ್ಯಕ್ಷ ರಾಜೇಂದ್ರ ಅಂಬಲಿ, ಗೋವಿಂದ ಡಾಗಾ, ಸೋಮನಾಥ ಗೊಂಬಿ, ರಮೇಶ ಕೊಣ್ಣೂರ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸವಿತಾ ಹೊಸೂರ, ಸುವರ್ಣಾ ಕೊಪ್ಪದ, ಪ್ರವೀಣ ಕೋಲಾರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next