Advertisement

ರಾಜೀನಾಮೆ ಕೊಟ್ಟವರಿಗೂ ಸಿದ್ದು ನಾಯಕ: ಡಿಕೆಶಿ

11:46 PM Dec 16, 2019 | Lakshmi GovindaRaj |

ಬೆಂಗಳೂರು: “ನಮ್ಮ ಪಕ್ಷಕ್ಕೆ ರಾಜೀನಾಮೆ ಕೊಟ್ಟು ಬಿಜೆಪಿಯಿಂದ ಗೆದ್ದು ಬಂದವರೇ ಸಿದ್ದರಾಮಯ್ಯ ನಮ್ಮ ನಾಯಕರು ಎಂದು ಹೇಳುತ್ತಿದ್ದಾರೆ. ಇದು ನಮಗೆ ತುಂಬಾ ಖುಷಿ ಆಗುತ್ತದೆ. ನಮಗೆ ಅಷ್ಟೇ ಸಾಕು. ಹಾಗಾಗಿ, ಯಡಿಯೂರಪ್ಪ ಈಸ್‌ ನೋ ಮೋರ್‌ ಎ ಲೀಡರ್‌’ ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್‌ ಟಾಂಗ್‌ ನೀಡಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಯಾವುದೇ ಲಾಬಿ ಮಾಡುತ್ತಿಲ್ಲ. ಕೆಪಿಸಿಸಿ ಅಧ್ಯಕ್ಷ ಸ್ಥಾನ ಖಾಲಿ ಇಲ್ಲ. ನನಗೆ ಯಾರ ಬೆಂಬಲವೂ ಬೇಡ, ಕೆಪಿಸಿಸಿ ಅಧ್ಯಕ್ಷ ಅಂತ ನನ್ನ ಹೆಸರು ಹೇಳಬೇಡಿ. ನಾನು ಪಕ್ಷದ ನಿಷ್ಟಾವಂತ ಕಾರ್ಯಕರ್ತನಾಗಿ ಕೆಲಸ ಮಾಡ್ತಿದ್ದೇನೆ ಎಂದರು. ನಾನು ಮಾತ್ರ ಕಾಂಗ್ರೆಸ್‌ ನಲ್ಲಿ ಸಮರ್ಥ ಅಲ್ಲ, ಎಲ್ಲರೂ ಸಮರ್ಥರೇ.

ನಮ್ಮ ನಾಯಕರೆಲ್ಲ ಸಮರ್ಥರೇ ಇದ್ದಾರೆ, ದಿನೇಶ್‌ ಗುಂಡೂರಾವ್‌ ಸಮರ್ಥರಲ್ವಾ? ಸಿದ್ದರಾಮಯ್ಯ ಸಮರ್ಥರಲ್ವಾ? ಎಲ್ಲರೂ ಸಮರ್ಥ ನಾಯಕರೇ. ಸಿದ್ದರಾಮಯ್ಯ ಅತ್ಯಂತ ಲಕ್ಕಿಯೆಸ್ಟ್‌ ಸಮರ್ಥ ಸಿಎಂ ಆಗಿದ್ದರು. 11 ವರ್ಷಗಳಿಂದ ನಮ್ಮ ಶಾಸಕಾಂಗ ಪಕ್ಷದ ನಾಯಕರಾಗಿದ್ದಾರೆ. ಹಾಗಾಗಿ, ಎಲ್ಲರೂ ಸಮರ್ಥ ನಾಯಕರೇ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next