Advertisement

ಸಿದ್ದು-ಸಿಎಂ ಸಂಬಂಧ ಹಳಸಿದೆ: ಕುಮಾರ್‌ ಬಂಗಾರಪ್ಪ

01:17 AM Apr 12, 2019 | Team Udayavani |

ಶಿವಮೊಗ್ಗ: ದೇವೇಗೌಡ, ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಇವರ ಮಧ್ಯೆ ಸಂಬಂಧ ಹಳಸಿದೆ. ಆದರೆ, ತೋರಿಕೆಗಾಗಿ ಎಲ್ಲರೂ ಒಂದಾಗಿದ್ದಾರೆ ಎಂದು ಮಾಜಿ ಸಚಿವ ಹಾಗೂ ಸೊರಬ ಕ್ಷೇತ್ರದ ಶಾಸಕ ಕುಮಾರ್‌ ಬಂಗಾರಪ್ಪ ಟೀಕಿಸಿದರು.

Advertisement

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚುನಾವಣೆಗಾಗಿ ದೋಸ್ತಿ ನಾಯಕರೆಲ್ಲ ನಾವು ಒಂದು ಎನ್ನುತ್ತ ಜಪ ಮಾಡುತ್ತಿದ್ದಾರೆ.

ಆದರೆ, ಇವರ ಮಧ್ಯೆ ಸಂಬಂಧ ಹಳಸಿದೆ. ತುಮಕೂರು, ಹಾಸನ, ಮಂಡ್ಯ ಮುಂತಾದೆಡೆ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಒಂದಾಗಿ ಚುನಾವಣಾ ಪ್ರಚಾರ ನಡೆಸಿದ್ದಾರೆ. ಆದರೆ, ಅದು ಮನ:ಪೂರ್ವಕವಾಗಿ ನಡೆಸಿದ ಪ್ರಚಾರವಲ್ಲ. ಹೀಗಾಗಿ, ಅವರ ಚುನಾವಣಾ ಪ್ರಚಾರ ಸಂಪೂರ್ಣ ಫೇಲ್‌ ಆಗಿದೆ ಎಂದರು.

ಚುನಾವಣೆ ವೇಳೆ ಕುಮಾರಸ್ವಾಮಿ ತಮ್ಮ ಅಧಿ ಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ. ಹೀಗಾಗಿಯೇ, ಮಂಡ್ಯ ಜಿಲ್ಲಾಧಿಕಾರಿಯನ್ನು ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಬೇರೆ ಕಡೆಗೆ ವರ್ಗಾವಣೆ ಮಾಡಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next