Advertisement

ಕುಡುಕ ಬಿಟ್ಟರೆ ಮತ್ಯಾರು ಸಿದ್ದುಗೆ “ಹುಲಿಯಾ’ಎನ್ನಲು ಸಾಧ್ಯ?

11:19 PM Dec 08, 2019 | Lakshmi GovindaRaj |

ಗದಗ: ದೀಪ ಆರುವಾಗ ಹೆಚ್ಚು ಪ್ರಕಾಶಿಸುವುದರ ಜತೆಗೆ ಭಾರೀ ಶಬ್ದ ಮಾಡುತ್ತದೆ. ಅದರಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವ್ಯಕ್ತಿಯೊಬ್ಬರು “ಹುಲಿಯಾ’ ಎಂದಿದ್ದಾರೆ ಎಂದು ಸಚಿವ ಕೆ.ಎಸ್‌.ಈಶ್ವರಪ್ಪ ಟೀಕಿಸಿದರು. ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ ಸಿದ್ದರಾಮಯ್ಯ ಅವರಿಗೆ “ಹುಲಿಯಾ’ ಎಂದಿದ್ದಾರೆ. ಕುಡುಕರು ಬಿಟ್ಟರೆ, ಮತ್ಯಾರು ಹೀಗೆ ಹೇಳಲು ಸಾಧ್ಯ ಎಂದು ಪ್ರಶ್ನಿಸಿದರು.

Advertisement

ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಎರಡು ಸ್ಥಾನ ಗೆಲ್ಲುವುದಿಲ್ಲ ಎನ್ನುತ್ತಿದ್ದ ವಿರೋಧ ಪಕ್ಷಗಳು ಗೆದ್ದಿದ್ದು ಒಂದೊಂದೇ ಸ್ಥಾನ. ಬಿಜೆಪಿ 22 ಸ್ಥಾನ ಗೆಲ್ಲುತ್ತದೆ ಎಂದು ಹೇಳಿಕೊಳ್ಳಲು ಸ್ವತಃ ನಾವೇ ಸಂಕೋಚ ಪಟ್ಟುಕೊಳ್ಳುತ್ತಿದ್ದೆವು. ಆದರೆ, ಜನ ನಮ್ಮನ್ನು 25 ಸ್ಥಾನಗಳಲ್ಲಿ ಗೆಲ್ಲಿಸಿದರು. ವಿವಿಧ ಚುನಾವಣೆಗಳಲ್ಲಿ ಮತದಾರರು ಕಾಂಗ್ರೆಸ್‌-ಜೆಡಿಎಸ್‌ ಪಕ್ಷಗಳನ್ನು ಈಗಾಗಲೇ ತಿರಸ್ಕರಿಸಿ, ಹೊಡೆದೋಡಿಸಿದ್ದಾರೆ. ವಿಧಾನಸಭಾ ಉಪಚುನಾವಣೆಯಲ್ಲಿ ಎಲ್ಲ 15 ಕ್ಷೇತ್ರಗಳಲ್ಲೂ ಈ ಫಲಿತಾಂಶ ಮರುಕಳಿಸಲಿದೆ ಎಂದು ಹೇಳಿದರು.

ನಾನು ಕುರುಬ ನಾಯಕನಲ್ಲ. ನಾನೊಬ್ಬ ಸಾಮಾನ್ಯ ಕಾರ್ಯಕರ್ತ. ಜನರ ಮಧ್ಯೆಯೇ ಬದುಕುವವನು.
-ಈಶ್ವರಪ್ಪ,ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next