Advertisement

ಸಿದ್ದು-ಗೌಡರದು ರಾಜಕೀಯ ಅಪ್ಪುಗೆ

06:00 AM Oct 24, 2018 | Team Udayavani |

ಶ್ರೀರಂಗಪಟ್ಟಣ: ಸಿದ್ದರಾಮಯ್ಯ ಹಾಗೂ ದೇವೇಗೌಡರದ್ದು ಧೃತರಾಷ್ಟ್ರ ಆಲಿಂಗನ. ಹಾವು-ಮುಂಗುಸಿಯಂತಿರುವ ಅವರು ಒಂದಾಗಲು ಎಂದಿಗೂ ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಟೀಕಿಸಿದರು. ನಗರದಲ್ಲಿ ಮಂಗಳವಾರ ಬಿಜೆಪಿ ಪರ ಪ್ರಚಾರ ನಡೆಸಿ, ಕಾಂಗ್ರೆಸ್‌-ಜೆಡಿಎಸ್‌ ವಿರುದ್ಧ ವಾಗ್ಧಾಳಿ ನಡೆಸಿದರು. 

Advertisement

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸಲು ದೇವೇಗೌಡರು ಮೈಸೂರಲ್ಲಿ ಏನೆಲ್ಲಾ ಮಾಡಿದ್ರು ಅನ್ನೋದು ಎಲ್ಲರಿಗೂ ಗೊತ್ತಿದೆ. ಬಾದಾಮಿಯಲ್ಲಿ ಸಿದ್ದರಾಮಯ್ಯ ಗೆಲ್ಲದಿದ್ದರೆ ಅವರ ರಾಜಕೀಯ ಭವಿಷ್ಯವೇ ಮುಗಿದು ಹೋಗುತ್ತಿತ್ತು. ಈಗ ಅಂತರಾಳದಲ್ಲಿ ದ್ವೇಷ ಕಾರುತ್ತಾ, ಜನರ ಮುಂದೆ ತೋರಿಕೆಯ ಆಲಿಂಗನ ಮಾಡಿಕೊಂಡಿದ್ದಾರೆ. ಇಬ್ಬರದ್ದೂ ರಾಜಕೀಯ
ಅಪ್ಪುಗೆಯೇ ಹೊರತು ಪ್ರಾಮಾಣಿಕ ಅಪ್ಪುಗೆಯಲ್ಲ ಎಂದರು.

ಹಾವು-ಮುಂಗುಸಿ ತರ ಇರುವ ದೇವೇಗೌಡ-ಸಿದ್ದರಾಮಯ್ಯ ಒಂದಾಗಲು ಸಾಧ್ಯವೇ? 25 ಜನ್ಮ ಕಳೆದರೂ ಇಬ್ಬರೂ
ಒಂದಾಗುವುದಿಲ್ಲ. ಈ ಸರ್ಕಾರದಿಂದ ಕುಮಾರಸ್ವಾಮಿ, ದೇವೇಗೌಡರಿಗೆ ಸಂತೋಷವಿಲ್ಲ. ನಿದ್ದೆ ಮಾಡುವ ಸಿದ್ದರಾಮಣ್ಣನಿಗಂತೂ ಕೊಂಚವೂ ಇಷ್ಟವಿಲ್ಲ. ಜೆಡಿಎಸ್‌-ಕಾಂಗ್ರೆಸ್‌ ಹೊಂದಾಣಿಕೆ ಒಡೆದು ಹೋದ ಹಾಲಿದ್ದಂತೆ. ಒಡೆದು ಹೋದ ಹಾಲನ್ನು ರಾಜ್ಯದ ಜನರಿಗೆ ಕೊಡಲು ಬಂದಿದ್ದಾರೆ. 

● ಆರ್‌.ಅಶೋಕ್‌, ಮಾಜಿ ಉಪ ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next