Advertisement

ಸಿದ್ದು ಟ್ವೀಟ್ ವಿಶ್ವಾಸದ್ದೋ, ಕಾಲೆಳೆದಿದ್ದೋ: ಲಿಂಬಾವಳಿ

01:31 AM May 17, 2019 | Team Udayavani |

ಕಲಬುರಗಿ: ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಿಎಂ ಸ್ಥಾನಕ್ಕಿಂತ ಉನ್ನತ ಸ್ಥಾನದ ಅರ್ಹತೆ ಇದೆ ಎಂಬುದಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿರುವುದು ವಿಶ್ವಾಸದ ಪ್ರೀತಿಯೋ ಅಥವಾ ಕಾಲೆಳೆಯೋ ಪ್ರೀತಿಯೋ? ಗೊತ್ತಿಲ್ಲ ಎಂದು ಬಿಜೆಪಿ ಮುಖಂಡ ಅರವಿಂದ ಲಿಂಬಾವಳಿ ವ್ಯಂಗ್ಯವಾಡಿದರು.

Advertisement

ಚಿಂಚೋಳಿ ಕ್ಷೇತ್ರದ ಪ್ರಚಾರ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಒಟ್ಟಾರೆ ಈ ಟ್ವೀಟ್‌ಗಳ ಸಮರ ನೋಡಿದರೆ ಇದು ಚುನಾವಣೆ ಪ್ರಚಾರವೋ ಅಥವಾ ಅವರವರ ನಡುವಿನ ಕಿತ್ತಾಟವೋ ಗೊತ್ತಾಗುತ್ತಿಲ್ಲ. ಈ ರೀತಿ ಕಿತ್ತಾಟದಲ್ಲಿ ತೊಡಗಿದ್ದರೆ ಜನರು ವೋಟ್ ಹಾಕಲಿದ್ದಾರೆ ಎಂಬುದಾಗಿ ತಿಳಿದುಕೊಂಡಿದ್ದೀರಾ ಎಂದು ಪ್ರಶ್ನಿಸಿದರು.

ಕಾಂಗ್ರೆಸ್‌ ಸಂಖ್ಯಾಬಲ ಕುಸಿತ: ಜೆಡಿಎಸ್‌-ಕಾಂಗ್ರೆಸ್‌ ನಾಯರಕು ಕನಿಷ್ಠ ಉಪ ಚುನಾವಣೆಯಲ್ಲಾದರೂ ಒಂದಾಗುತ್ತಾರೆ ಅಂದುಕೊಂಡಿದ್ದೀವಿ. ಆದರೆ ಈ ಕಿತ್ತಾಟ ನೋಡಿದಲ್ಲಿ ಚುನಾವಣೆ ನಂತರ ಸರ್ಕಾರ ಉಳಿಯಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ರಾಜ್ಯದಲ್ಲಿ ಮತ್ತಷ್ಟು ಉಪ ಚುನಾವಣೆಗಳು ಬರಬಹುದು. ಬಿಜೆಪಿ ಬೆಂಬಲಿಸಲು ಹಲವು ನಾಯಕರು ರಾಜೀನಾಮೆ ನೀಡಬಹುದಾಗಿದೆ. ಶಾಸಕ ರಮೇಶ್‌ ಜಾರಕಿಹೊಳಿ ಮಾತ್ರವಲ್ಲ ಇತರರೂ ಬರಬಹುದು. ಹೀಗಾಗಿ ಕಾಂಗ್ರೆಸ್‌ ಸಂಖ್ಯಾಬಲ ಕಡಿಮೆಯಾಗೋದು ಖಚಿತ ಎಂದು ಲಿಂಬಾವಳಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next