Advertisement

“ಹುಷಾರಿಲ್ಲ ಎನ್ನುವ ಸಿದ್ದು ಡಿನ್ನರ್‌ಗೆ ದೆಹಲಿಗೆ ಹೋಗ್ತಾರೆ’

11:30 PM Aug 13, 2019 | Lakshmi GovindaRaj |

ಬಾದಾಮಿ: “ಆರೋಗ್ಯದಲ್ಲಿ ಏರುಪೇರು ಆಗೋದು ಸಹಜ. ಆದರೆ ಕಣ್ಣು ಆಪರೇಷನ್‌ ಆಗಿದೆ ಎನ್ನುವ ಸಿದ್ದರಾಮಯ್ಯ ದೆಹಲಿಗೆ ಹೋಗಿ ತಮ್ಮ ನಾಯಕರ ಜತೆ ಓಡಾಡುತ್ತಾರೆ, ಡಿನ್ನರ್‌ಗೆ ಹೋಗುತ್ತಾರೆ. ಆದರೆ, ಅವರ ಕ್ಷೇತ್ರದ ಜನರ ಸಮಸ್ಯೆ ಕೇಳ್ಳೋದಕ್ಕೆ ಆಗಲ್ಲ’ ಎಂದು ಮೊಳಕಾಲ್ಮೂರು ಶಾಸಕ ಬಿ. ಶ್ರೀರಾಮುಲು ಆರೋಪಿಸಿದರು.

Advertisement

ತಾಲೂಕಿನ ನೆರೆ ಪೀಡಿತ ಗ್ರಾಮಗಳಾದ ಶಿರಬಡಗಿ, ಮಂಗಳೂರು, ನವೀಲಹೊಳೆ, ಹಿರೇನಶಿಬಿ, ಗೋನಾಳ, ಶಿವಯೋಗ ಮಂದಿರ, ನೆಲವಿಗಿ, ನಂದಿಕೇಶ್ವರ, ಪಟ್ಟದಕಲ್ಲ, ಆಸಂಗಿ, ಕೊಟ್ನಳ್ಳಿ ಸೇರಿ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಮಾತನಾಡಿ, ರಾಜ್ಯದಲ್ಲಿ ಒಟ್ಟು 17 ಜಿಲ್ಲೆಗಳು ಪ್ರವಾಹಕ್ಕೆ ತುತ್ತಾಗಿದ್ದು, ಸುಮಾರು 42 ಸಾವಿರ ಹೆಕ್ಟೇರ್‌ ಭೂಮಿ ಹಾನಿಯಾಗಿದೆ. ಮೃತಪಟ್ಟ ಕುಟುಂಬದವರಿಗೆ 5 ಲಕ್ಷ, ನಿರಾಶ್ರಿತರಿಗೆ 10 ಸಾವಿರ, ಬಾಡಿಗೆ ಇರುವವರಿಗೆ 5 ಸಾವಿರ ಕೊಡುತ್ತೇನೆಂದು ಸಿಎಂ ಯಡಿಯೂರಪ್ಪ ಘೋಷಿಸಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next