Advertisement

ಕೊನೆಗೂ ಮರಳಿ ಬಾರದ ಲೋಕಕ್ಕೆ ನಡೆದೇ ಬಿಟ್ಟ ಕನಸುಗಾರ ಉದ್ಯಮಿ

11:04 AM Jul 31, 2019 | Hari Prasad |

ತನ್ನ ಸಾವಿರಾರು ಉದ್ಯೋಗಿಗಳ ಹಾರೈಕೆ, ಕುಟುಂಬಸ್ಥರ ಕಾತರ ಮತ್ತು ಅಸಂಖ್ಯ ಗೆಳೆಯರ ಬಳಗದ ನೋವಿನ ಧ್ವನಿಗೆ ಓಗೊಡದೇ ಉದ್ಯಮಿ ಸಿದ್ದಾರ್ಥ್ ಹೆಗ್ಡೆ ಅವರು ಬಾರದ ಲೋಕಕ್ಕೆ ಪಯಣಿಸಿದ್ದಾರೆ. ಈ ಮೂಲಕ ಅದೆಷ್ಟೋ ಹೃದಯಗಳನ್ನು ಭಾರಗೊಳಿಸಿದ್ದಾರೆ. ಸೋಮವಾರ ಸಾಯಂಕಾಲದಿಂದ ದಕ್ಷಿಣ ಕನ್ನಡ ಜಿಲ್ಲೆಯ ಉಲ್ಲಾಳ ಸಮೀಪವಿರುವ ನೇತ್ರಾವತಿ ಸೇತುವೆ ಬಳಿಯಿಂದ ನಿಗೂಢವಾಗಿ ನಾಪತ್ತೆಯಾಗಿದ್ದ ಬಹುಕೋಟಿ ಉದ್ಯಮಿ, ಕೆಫೆ ಕಾಫಿ ಡೇ ಮಾಲಿಕ ಸಿದ್ದಾರ್ಥ್ ಅವರ ಮೃತದೇಹ ಬುಧವಾರ ಬೆಳಗಿನ ಜಾವ ಮಂಗಳೂರಿನ ಹೊಯ್ಗೆ ಬಝಾರ್ ಸಮುದ್ರ ತೀರ ಪ್ರದೇಶದಲ್ಲಿ ಪತ್ತೆಯಾಗಿದೆ. ನೀವು ಜೀವಂತ ಮರಳಿ ಬರುವಂತಾಗಲಿ ಎಂದು ನಿನ್ನೆಯಿಂದೀಚೆ ಹಾರೈಸಿದ ಜೀವಗಳೆಷ್ಟೋ… ಆದರೆ ನಮ್ಮೆಲ್ಲರ ಕಾತರಗಳನ್ನು ಸುಳ್ಳುಮಾಡಿ ನೀವು ಮಾತ್ರ ಮರಳಿ ಬಾರದ ಲೋಕಕ್ಕೆ ಹೋಗೇಬಿಟ್ಟಿರಲ್ಲಾ… ‘ಹೀಗ್ಯಾಕೆ ಮಾಡಿಕೊಂಡ್ರಿ ಸಿದ್ದಾರ್ಥ್…!?’

Advertisement
Advertisement

Udayavani is now on Telegram. Click here to join our channel and stay updated with the latest news.

Next