Advertisement

ಪೇಜಾವರ ಶ್ರೀಗಳು ಸರ್ವಧರ್ಮ ಸಾಮರಸ್ಯಕ್ಕೆ ಶ್ರಮಿಸಿದ್ದರು:ಸಿದ್ದರಾಮಯ್ಯ

09:58 AM Dec 30, 2019 | Team Udayavani |

ಬೆಂಗಳೂರು: ಪೇಜಾವರ ಶ್ರೀಗಳು ಸಮಾಜದ ಅಂಕು ಡೊಂಕು ತಿದ್ದುವ ಪ್ರಯತ್ನ ಮಾಡುವ ಮೂಲಕ ಸರ್ವಧರ್ಮ ಸಾಮರಸ್ಯವನ್ನು ಕಾಪಾಡಲು ಪ್ರಯತ್ನಿಸಿದ್ದರು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿ¨ªಾರೆ.

Advertisement

ತಮ್ಮ ನಿವಾಸ ಕಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶ್ವೇಶತೀರ್ಥರು ಸಮಾಜದ ಬದಲಾವಣೆಗೆ ಶ್ರಮಿಸಿ ಮೈಸೂರಿನ ಕೈಲಾಸಪುರಿ ಸೇರಿದಂತೆ ರಾಜ್ಯದ ಹಲವು ದಲಿತರ ಕೇರಿಗಳಿಗೆ ಭೇಟಿ ನೀಡಿದ್ದರು. ಇತ್ತೀಚೆಗೆ ರಮ್ಜಾನ್‌ ವೇಳೆ ಇಫ್ತಾರ್‌ ಕೂಟ ಆಯೋಜಿಸಿದ್ದರು ಎಂದು ಸ್ಮರಿಸಿದರು.

ಪೇಜಾವರ ಶ್ರೀಗಳು ಹಾಗೂ ನನ್ನ ನಡುವೆ ರಾಜಕೀಯ, ವೈಚಾರಿಕ ಬಿನ್ನಾಭಿಪ್ರಾಯವಿತ್ತೇ ವಿನಃ ಯಾವುದೇ ಧಾರ್ಮಿಕ ಭಿನ್ನಾಭಿಪ್ರಾಯ ಇರಲಿಲ್ಲ ಎಂದು ಸ್ಪಷ್ಟಪಡಿಸಿ¨ªಾರೆ. ನಾನು ಮಂಗಳೂರಿಗೆ ಭೇಟಿ ನೀಡಿದಾಗ ಕೃಷ್ಣ ಮಠಕ್ಕೆ ಹೋಗಬಾರದೆಂಬುದೇನೂ ಇರಲಿಲ್ಲ. ಆದರೆ ಮಠಕ್ಕೆ ಭೇಟಿ ನೀಡು ಸಂದರ್ಭ ಸೃಷ್ಟಿಯಾಗಲಿಲ್ಲ.

ನಾನು ಹಲವು ಬಾರಿ ಶ್ರೀಗಳನ್ನು ಭೇಟಿಯಾಗಿದ್ದು , ನನ್ನೊಂದಿಗೆ ವಿಶ್ವೇಶ ತೀರ್ಥರು ಆತ್ಮೀಯವಾಗಿ, ಧಾರ್ಮಿಕ, ರಾಜಕೀಯ ವಿಚಾರಗಳ ಬಗ್ಗೆ ಚರ್ಚೆ ಮಾಡುತ್ತಿದ್ದರು.ಅಂತಹ ಹಿರಿಯ ಯತಿ ಈಗ ನಮ್ಮೊಂದಿಗೆ ಇಲ್ಲ. ಮೃತರ ಆತ್ಮಕ್ಕೆ ಚಿರಶಾಂತಿ ದೊರಕಲಿ. ಮಠದ ಭಕ್ತಾದಿಗಳು, ಅನುಯಾಯಿಗಳಿಗೆ ದುಃಖ ತಡೆದುಕೊಳ್ಳುವ ಶಕ್ತಿಯನ್ನು ದೇವರು ಕೊಡಲಿ ಎಂದು ಪ್ರಾರ್ಥಿಸುವುದಾಗಿ ಸಿದ್ದರಾಮಯ್ಯ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next