Advertisement
ಸುದ್ದಿಗಾರರ ಜತೆ ಮಾತನಾಡಿದ ಅವರು, ಶೇಖ್ ಫಾಝಿಲ್ ಯಾರೆಂದು ನನಗೆ ಗೊತ್ತಿಲ್ಲ. ಪುರಾವೆ ಇದ್ದರೆ ಪೊಲೀಸರು ಕ್ರಮ ಕೈಗೊಳ್ಳಲಿ. ಶಾಸಕ ಜಮೀರ್ ಡ್ರಗ್ಸ್ ಜಾಲದಲ್ಲಿ ಇದ್ದಾರೆ ಎಂಬುದಕ್ಕೆ ಪುರಾವೆ ಇಲ್ಲ. ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿರುವ ನಟಿ ರಾಗಿಣಿ ಬಿಜೆಪಿಯ ಪ್ರಚಾರಕ್ಕೆ ಹೋಗಿದ್ದರು. ಅದಕ್ಕೆ ಏನೆಂದು ಕರೆಯಬೇಕು. ಯಡಿಯೂರಪ್ಪ ಪುತ್ರ ವಿಜಯೇಂದ್ರ ಜತೆಗೆ ಕೆ.ಆರ್. ಪೇಟೆಯಲ್ಲಿ ಕ್ಯಾಂಪೇನ್ ಮಾಡ್ತಾ ಇದ್ದರು.
Related Articles
Advertisement
ದೇವರು ಹೇಗೆ ಹೊಣೆ ಆಗ್ತಾರೆ: ಆರ್ಥಿಕ ಕುಸಿತಕ್ಕೆ ದೇವರೆ ಹೊಣೆ ಎಂಬ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ದೇವರು ಯಾಕೆ ಹೊಣೆ ಆಗುತ್ತಾರೆ. ಪ್ರವಾಹ ಈಗ ಬಂದಿದೆಯಾ, ಕೋವಿಡ್ ಈಗ ಬಂದಿರುವುದು ನಿಜ. ಇಡೀ ದೇಶ-ಜಗತ್ತಿನಲ್ಲಿ ಕೊರೊನಾ ಇದೆ. ಎಲ್ಲ ರಾಷ್ಟ್ರದವರು ದೇವರೇ ಹೊಣೆ ಎಂದು ಹೇಳಿದ್ದಾರಾ? ನಿರ್ಮಲಾ ಸೀತಾರಾಮನ್ ತರಹ ಅಮೆರಿಕ, ಚೀನಾ, ಜಪಾನ್, ಫ್ರಾನ್ಸ್ ಹೇಳಿವೆಯಾ ಎಂದು ಪ್ರಶ್ನಿಸಿದರು.
ಡ್ರಗ್ಸ್ ಯಾರೇ ತೆಗೆದುಕೊಂಡರೂ ಅದೊಂದು ಸಾಮಾಜಿಕ ಕಂಟಕ. ಯಾರೇ ತೆಗೆದುಕೊಳ್ಳಲಿ, ಸರಬರಾಜು ಮಾಡಲಿ ಅದು ಅಪರಾಧ. ಅದಕ್ಕೆ 10ರಿಂದ 20 ವರ್ಷ ಶಿಕ್ಷೆ. ಇದೂವರೆಗೂ ಎಷ್ಟು ಜನರಿಗೆ ಶಿಕ್ಷೆ ಆಗಿದೆ? ರಾಜ್ಯ ಅಷ್ಟೇ ಅಲ್ಲ, ದೇಶದಲ್ಲೇ ಡ್ರಗ್ಸ್ ಜಾಲವಿದೆ. ಇದಕ್ಕೆ ಯಾರು ಜವಾಬ್ದಾರಿ| ಈಗ ಸಿಕ್ಕಿಹಾಕಿಕೊಂಡವರ ಮೇಲೆ ಕ್ರಮ ಆಗಲಿ. ಇದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಅಧಿವೇಶನದಲ್ಲಿ ಇದನ್ನು ಪ್ರಸ್ತಾಪಿಸುತ್ತೇನೆ.– ಸಿದ್ದರಾಮಯ್ಯ ವಿಪಕ್ಷ ನಾಯಕ.