Advertisement

ಸಿದ್ಧರಾಮೇಶ್ವರ ತತ್ವಾದರ್ಶ ಪಾಲಿಸಿ; ಸುಭಾಷ ಗುತ್ತೇದಾರ

04:16 PM Jan 15, 2021 | Team Udayavani |

ಆಳಂದ: ಜನಪರ ಕಾರ್ಯಗಳ ಮೂಲಕ ಕಾಯಕ ಮತ್ತು ದಾಸೋಹ ಪರಂಪರೆ ಬಿತ್ತಿ ಬೆಳೆದು ವಚನ ಸಾಹಿತ್ಯದ ಮೂಲಕ ಅಪಾರ ಸಂಖ್ಯೆಯ ಭಕ್ತರ ಮನದಾಳದಲ್ಲಿ ಉಳಿದ ಶಿವಯೋಗಿ ಸಿದ್ಧರಾಮೇಶ್ವರ ತತ್ವಾದರ್ಶಗಳನ್ನು ಪಾಲಿಸಲು ಮುಂದಾಗಬೇಕು ಎಂದು ಶಾಸಕ ಸುಭಾಷ ಗುತ್ತೇದಾರ ಹೇಳಿದರು.

Advertisement

ಪಟ್ಟಣದ ತಹಶೀಲ್ದಾರ್‌ ಕಚೇರಿಯಲ್ಲಿ ತಾಲೂಕು ಆಡಳಿತ ಹಮ್ಮಿಕೊಂಡ ಸೊಲ್ಲಾಪುರದ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ನಿಮಿತ್ತ ಏರ್ಪಡಿಸಿದ್ದ ಸರಳ ಕಾರ್ಯಕ್ರಮದಲ್ಲಿ ಸಿದ್ಧರಾಮೇಶ್ವರ ಭಾವಚಿತ್ರಕ್ಕೆ ಪೂಜೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಶರಣರು, ಸಂತರು ಯಾವುದೇ ಜಾತಿ ಮತಕ್ಕೆ ಸೀಮಿತವಾಗಿರದೆ ಸಮಸ್ತ ಮಾನವ ಜನಾಂಗಕ್ಕೆ ದಾರಿದೀಪವಾಗಿದ್ದಾರೆ.

ಅವರ ಹಾಕಿಕೊಟ್ಟ ಮಾರ್ಗದಲ್ಲಿ ಕಾಯಕ ದಾಸೋಹವನ್ನು ಮುನ್ನಡೆಸಿಕೊಂಡರೆ ಸಮಾಜ ಸರಿದಾರಿಗೆ ಕೊಂಡೊಯ್ಯಲು ಸಾಧ್ಯವಿದೆ. ಸಿದ್ಧರಾಮೇಶ್ವರರು ಮಾಡಿದ ಕಾರ್ಯ ನೀಡಿದ ವಚನ ಸಾಹಿತ್ಯ ಅಧ್ಯಯನ ಕೈಗೊಳ್ಳಬೇಕು ಎಂದು ಹೇಳಿದರು. ತಹಶೀಲ್ದಾರ್‌ ಯಲ್ಲಪ್ಪ ಸುಬೇದಾರ ಮಾತನಾಡಿ, ಶರಣರು ತಮಗಾಗಿ ಏನನ್ನೂ ಮಾಡದೆ ಜನರ ಒಳಿತಿಗಾಗಿ ಶ್ರಮಿಸಿದ್ದಾರೆ. ಸಿದ್ಧರಾಮೇಶ್ವರ ತತ್ವಾದರ್ಶಗಳನ್ನು ಜನಮಾನಸಕ್ಕೆ ತಲುಪಿಸುವ ಉದ್ದೇಶದಿಂದ ಸರ್ಕಾರ ಜಯಂತಿಗಳನ್ನು ಆಚರಿಸುತ್ತಿದೆ.

ಇದನ್ನೂ ಓದಿ:ಕನ್ನಡಿಗ ದುರ್ಗ‍ಪ್ಪ ಕೋಟಿಯವರ್‌ ಅವರಿಗೆ ಶ್ರೇಷ್ಠ ಶಿಕ್ಷಕ ಪ್ರಶಸ್ತಿ-2020 ಪ್ರಶಸ್ತಿ ಪ್ರಧಾನ

ಇದರ ಲಾಭವನ್ನು ಪಡೆದುಕೊಂಡು ಶರಣರ ಮಾರ್ಗದಲ್ಲಿ ಸಾಗಬೇಕು ಎಂದರು. ಪುರಸಭೆ ಉಪಾಧ್ಯಕ್ಷ ಈರಣ್ಣಾ ಹತ್ತರಕಿ, ಭೋವಿ ಸಮಾಜದ ತಾಲೂಕು ಅಧ್ಯಕ್ಷ ಅಂಬಣ್ಣಾ ಕುಸಾಳಕರ್‌, ನಗರ ಅಧ್ಯಕ್ಷ ಯಲ್ಲಪ್ಪ ಎಚ್‌.ಡಿ, ಕಲ್ಯಾಣರಾವ್‌ ಮಟಕಿ, ಪಿಂಟು, ಮಾಜಿ ಅಧ್ಯಕ್ಷ ತಾಯಪ್ಪ ಗುತ್ತೇದಾರ, ಪುರಸಭೆ ಮಾಜಿ ಸದಸ್ಯ ಅಣ್ಣಪ್ಪ ದಂಡಗುಲೆ, ಸುರೇಶ ದೇವಕರ್‌, ಪರಶುರಾಮ ಘೋಡಕೆ, ರಾಜು ಪಿರಾಜಿ ನಿಂಬರಗಾ, ಗೋವಿಂದ ಕುಸಾಳಕರ್‌, ವಿಲಾಸ ಪಿರಾಜಿ, ವೆಂಕಟೇಶ ಗುತ್ತೇದಾರ, ಯಲ್ಲಪ್ಪ ಗುತ್ತೇದಾರ, ರಾಜು ದಂಡಗುಲೆ, ವೆಂಕಟ ಪವಾರ, ಕಂದಾಯ ನಿರೀಕ್ಷಕ ಶರಣಬಸಪ್ಪ ಹಕ್ಕಿ, ಮುಖಂಡ ಶ್ರೀಶೈಲ ಖಜೂರಿ, ಸಿದ್ಧು ಪೂಜಾರಿ, ಸಂಜಯ ನಾಯಕ, ಸಂತೋಷ ಹೂಗಾರ ಮತ್ತಿತರರು ಪಾಲ್ಗೊಂಡಿದ್ದರು. ವಿಎ ಆನಂದ ಪೂಜಾರಿ ಸ್ವಾಗತಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next