Advertisement

ಸಿದ್ದರಾಮಯ್ಯರದು ಹತಾಶ ಮನೋಭಾವ: ಬಿ.ಸಿ. ಪಾಟೀಲ್‌

10:30 PM Mar 26, 2022 | Team Udayavani |

ಚಿತ್ರದುರ್ಗ: ವಿಪಕ್ಷ ನಾಯಕ ಸಿದ್ದರಾಮಯ್ಯಅವರಿಗೆ ಹತಾಶ ಮನೋಭಾವ ಕಾಡುತ್ತಿದೆ. ಡಿಕೆಶಿ ಹಾಗೂ ಸಿದ್ದರಾಮಯ್ಯ ಇಬ್ಬರೂ ಮುಖ್ಯಮಂತ್ರಿ ಹುದ್ದೆಯ ಕನಸು ಕಾಣುತ್ತಿದ್ದು, ಅವರಿಬ್ಬರ ನಡುವೆ ದಿನೇ ದಿನೇ ಕಂದಕ ಹೆಚ್ಚಾಗುತ್ತಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್‌ ಹೇಳಿದರು.

Advertisement

ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ವಿರೋಧ ಪಕ್ಷದವರು ಹಿಜಾಬ್‌, ಕಾಶ್ಮೀರಿ ಫೈಲ್‌ ಸೇರಿದಂತೆ ಮತ್ತಿತರೆ ವಿಚಾರಗಳಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ನಾವು ಮುಳುಗಿ ಹೋಗುತ್ತಿದ್ದೇವೆನೋ ಎಂಬ ಮನೋಭಾವ ಅವರಲ್ಲಿ ಕಾಡುತ್ತಿದೆ. ಆದ್ದರಿಂದ ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಆಗಿದ್ದವರು ಬಹಳ ತೂಕವಾಗಿ, ಗೌರವಯುತವಾಗಿ ಮಾತನಾಡಬೇಕು. ಯಾವುದೇ ಧರ್ಮ-ಜಾತಿ ಇರಲಿ, ಮನಸ್ಸಿಗೆ ನೋವಾಗದಂತೆ ಮಾತನಾಡಬೇಕು ಎಂದು ಸಲಹೆ ನೀಡಿದರು.

ಯಾವುದೇ ಚಲನಚಿತ್ರವನ್ನು ಥಿಯೇಟರ್‌ನಿಂದ ತೆಗೆಯಿರಿ, ಹಾಕಿ ಎಂದು ಹೇಳುವುದು ಯಾರ ಕೈಯಲ್ಲೂ ಇಲ್ಲ. ಅದು ಪ್ರೇಕ್ಷಕರಿಗೆ ಸಂಬಂ ಧಿಸಿದ್ದು. ಪ್ರೇಕ್ಷಕ ಸಿನಿಮಾ ಥಿಯೇಟರ್‌ಗೆ ಹೋಗುವ ತನಕ ಸಿನಿಮಾ ರನ್‌ ಆಗುತ್ತದೆ. ಈ ಹಿಂದೆ ಎಬಿಸಿ ಸೆಂಟರ್‌ಗಳಲ್ಲಿ ಕ್ರಮವಾಗಿ ಸಿನಿಮಾ ರನ್‌ ಆಗುತ್ತಿದ್ದವು. ತಂತ್ರಜ್ಞಾನ ಅಪ್‌ಡೇಟ್‌ ಆಗಿರುವ ಕಾರಣ ಈಗ ಏಕಕಾಲದಲ್ಲಿ ಎಬಿಸಿ ಸೆಂಟರ್‌ನಲ್ಲಿ ಸಿನಿಮಾ ರನ್‌ ಆಗುತ್ತವೆ. ಯಾರೂ ಯಾವ ಸಿನಿಮಾ ಹಾಕಿ ಎಂದು ಹೇಳಿಲ್ಲ.

ಪ್ರೇಕ್ಷಕರ ಬೇಡಿಕೆಗೆ ಅನುಸಾರವಾಗಿ ಸಿನಿಮಾ ರನ್‌ ಆಗುತ್ತಿವೆ. “ದಿ ಕಾಶ್ಮೀರಿ ಫೈಲ್ಸ್‌’ನ ಅಂಶಗಳು ಪ್ರೇಕ್ಷಕರ ಮೇಲೆ ಪ್ರಭಾವ ಬೀರಿದ್ದರಿಂದ ಜನ ಕಿಕ್ಕಿರಿದು ಸಿನಿಮಾ ಥಿಯೇಟರ್‌ಗಳಿಗೆ ಹೋಗಿ ನೋಡುತ್ತಿದ್ದಾರೆ. ಇದರಲ್ಲಿ ರಾಜಕೀಯ ಮಾಡುವ ಅವಶ್ಯಕತೆ ಇಲ್ಲ ಎಂದು ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next