Advertisement

ಸಿದ್ದರಾಮಯ್ಯಗೆ ಮತಿಭ್ರಮಣೆ: ರಾಮುಲು

12:53 AM May 17, 2019 | Sriram |

ಹುಬ್ಬಳ್ಳಿ: ‘ಒಂದು ಬಾರಿ ನಾನೇ ಮುಖ್ಯಮಂತ್ರಿ, ಇನ್ನೊಂದು ಬಾರಿ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಎಂದು ಹೇಳಿಕೆ ನೀಡುತ್ತಿರುವ ಸಿದ್ದರಾಮಯ್ಯನವರಿಗೆ ಮತಿಭ್ರಮಣೆ ಆಗಿದೆ’ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಆರೋಪಿಸಿದರು.

Advertisement

ದೇವನೂರ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಎಲ್ಲ ಜಾತಿಯ ನಾಯಕರು ಸಿಎಂ ಆಗಿದ್ದಾರೆ. ಈಗಿನ ಸರದಿ ಉಳಿದಿರುವುದು ದಲಿತರು, ನಾಯಕ ಸಮಾಜದವರದು. ಚುನಾವಣೆ ಮುಗಿದ ಬಳಿಕ ದಲಿತ ಸಿಎಂ ವಿಷಯ ನಿಂತು ಹೋಗುತ್ತದೆ. ಸದ್ಯ ದಲಿತ ಸಿಎಂ ಮಾಡುವ ಅವಕಾಶ ಇದ್ದು, ಮಲ್ಲಿಕಾರ್ಜುನ ಖರ್ಗೆ ಅವರನ್ನೇ ಮುಖ್ಯಮಂತ್ರಿಯನ್ನಾಗಿ ಮಾಡಬೇಕು. ಇಲ್ಲವೇ ಪರಮೇಶ್ವರ ಅವರನ್ನು ಸಿಎಂ ಮಾಡಬೇಕು. ಕಾಂಗ್ರೆಸ್‌ನವರಿಗೆ ಸರ್ಕಾರ ಪತನಗೊಳ್ಳುವ ಸಮಯದಲ್ಲಿ ದಲಿತರು, ವಾಲ್ಮೀಕಿಗಳು ನೆನಪಾಗುತ್ತಾರೆ. ನಂತರ ಮರೆತು ಬಿಡುತ್ತಾರೆ. ದಲಿತ ಮುಖ್ಯಮಂತ್ರಿಯಾಗಲು ಇದು ಸೂಕ್ತ ಸಂದರ್ಭವಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next