Advertisement

ಎಸ್‌ಐಟಿಗೆ ಒಪ್ಪಿಸಲು ಸಿದ್ದರಾಮಯ್ಯ ಕಾರಣ’

02:20 AM Feb 15, 2019 | Team Udayavani |

ಬೆಂಗಳೂರು: ಆಡಿಯೋ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಎಸ್‌ಐಟಿ ತನಿಖೆಗೆ ವಹಿಸಬೇಕು ಎಂದು ಒತ್ತಾಯ ಮಾಡಿದ್ದು ಕಾಂಗ್ರೆಸ್‌. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರು ಸಭಾಧ್ಯಕ್ಷರ ಸೂಚನೆಗೆ ಬದ್ಧ  ಎಂದು ಹೇಳಿದ್ದರು. ಆದರೆ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಎಸ್‌ಐಟಿಗೆ ಒತ್ತಾಯಿಸಿದರು ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ಆರೋಪಿಸಿದರು.

Advertisement

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಕುಮಾರಸ್ವಾಮಿಯವರು ಯಾವುದೇ ತನಿಖೆ ಬಗ್ಗೆ ಒಲವು ತೋರಿದ್ದರೂ ಸಿದ್ದರಾಮಯ್ಯ ಅವರು ಎಸ್‌ಐಟಿ ತನಿಖೆಗೆ ಒತ್ತಾಯಿದ್ದಾರೆ. ಅವರಿಗೆ ತಮ್ಮ ಸೋಲನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸಿದ್ದರಾಮಯ್ಯ ಅವರದು ಕುತಂತ್ರ ರಾಜಕಾರಣ. ಎಸ್‌ಐಟಿ ರಚನೆ ದುರುಪಯೋಗವಾಗಲಿದ್ದು, ಕಾಂಗ್ರೆಸ್‌ ಬಲೆಗೆ ಕುಮಾರಸ್ವಾಮಿ ಬೀಳಲಿದ್ದಾರೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next