Advertisement

ಹೆಡ್ಗೆವಾರ್ ಪಠ್ಯ ಇರುವುದಕ್ಕೆನನ್ನ ವಿರೋಧವಿದೆ: ಸಿದ್ದರಾಮಯ್ಯ

09:58 PM Jun 04, 2022 | Team Udayavani |

ಚಿತ್ರದುರ್ಗ: ಪಠ್ಯಪುಸ್ತಕಗಳಲ್ಲಿ ಆರೆಸ್ಸೆಸ್‌Õ ಸಂಸ್ಥಾಪಕ ಹೆಡ್ಗೆವಾರ್ ಕುರಿತು ವಿಷಯ ಇರುವುದಕ್ಕೆ ನನ್ನ ವಿರೋಧವಿದೆ. ಮಕ್ಕಳಿಗೆ ಅವರ ಭಾಷಣ ಏಕೆ ಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

Advertisement

ಹೊಸದುರ್ಗದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಹೆಡ್ಗೆವಾರ್ ಯಾರು, ಅವರೇನು ಸ್ವಾತಂತ್ರ್ಯ ಹೋರಾಟಗಾರರಾ, ಹುತಾತ್ಮರಾ? ಆರ್‌ಎಸ್‌ಎಸ್‌ ಸಂಸ್ಥಾಪಕರು ಎನ್ನುವ ಕಾರಣಕ್ಕೆ ಪಠ್ಯವಾಗಬೇಕೆ ಎಂದು ಹೇಳುವ ಮೂಲಕ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆಗೆ ನನ್ನ ವಿರೋಧವಿದೆ.

ನೀವು ಮಕ್ಕಳಿಗೆ ಯಾವ ಸಂದೇಶ ನೀಡುತ್ತಿದ್ದೀರಿ? ಕುವೆಂಪು ರಚಿತ ನಾಡಗೀತೆ ತಿರುಚುವುದು, ಭಗತ್‌ಸಿಂಗ್‌, ನಾರಾಯಣಗುರು ಪಾಠಗಳನ್ನು ತೆಗೆಯುವುದು ಸರಿಯಲ್ಲ. ಲಂಚ ಹೊಡೆದು ರಾಜೀನಾಮೆ ಸಲ್ಲಿಸಿರುವ ಈಶ್ವರಪ್ಪನಿಂದ ನಾನು ಪಾಠ ಕಲಿಯಬೇಕಾ ಎಂದು ತಿರುಗೇಟು ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next