Advertisement

ಎಸ್ಡಿಪಿಐ, ಪಿಎಫ್ಐ, ಆರ್ ಎಸ್ಎಸ್, ಭಜರಂಗದಳ ಯಾರೇ ಇರಲಿ..: ಸಿದ್ದರಾಮಯ್ಯ

02:42 PM Apr 24, 2022 | Team Udayavani |

ಶಿವಮೊಗ್ಗ: ಪಿಎಸ್ಐ ನೇಮಕಾತಿ ಅಕ್ರಮ ನಡೆದ ಕೇಂದ್ರ ಯಾರದ್ದೆಂದು ನೀವ್ಯಾರು ಹೇಳುವುದೇ ಇಲ್ಲ. ಕಾಂಗ್ರೆಸ್ ನವರ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಬಾರದು‌. ಬಿಜೆಪಿಯವರು ಅವರ ತಪ್ಪಿನಿಂದ ಬಚಾವಾಗಲು ಕಾಂಗ್ರೆಸ್ ಮೇಲೆ ಗೂಬೆ ಕೂರಿಸಬಾರದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆ ಸಂಸ್ಥೆ ಬಿಜೆಪಿಯವರಿಗೆ ಸೇರಿದ್ದು, ಆಕೆ ಮಹಿಳಾ ಮೋರ್ಚಾದವರು. ಆಕೆಯ ಗಂಡನನ್ನು ಬಂಧಿಸಿದ್ದಾರೆ. ಆಕೆ ತಲೆ ಮರೆಸಿಕೊಂಡಿದ್ದಾಳೆ. ಅಂತಹ ಸಂಸ್ಥೆಯಲ್ಲಿ ಕಾಂಗ್ರೆಸ್ ನವರು ಅಕ್ರಮ ಮಾಡಲು ಸಾಧ್ಯವೇ? ಯಾರೇ ಇರಲಿ, ತಪ್ಪಿತಸ್ಥರಿಗೆ ಶಿಕ್ಷೆ ಅಗಬೇಕು ಎಂದರು.

ಇದನ್ನೂ ಓದಿ:ಪಿಎಸ್ಐ ನೇಮಕ ಅಕ್ರಮ; ಹಿನ್ನೆಲೆಯೆಲ್ಲವೂ ಕಾಂಗ್ರೆಸ್ ಮಯ: ಸುನಿಲ್ ಕುಮಾರ್

ಹಿಜಾಬ್, ಹಲಾಲ್, ಆಜಾನ್ ಹುಟ್ಟು ಹಾಕಿದವರು ಯಾರು? ರಾಜ್ಯದಲ್ಲಿ ಅಶಾಂತಿ ಹುಟ್ಟು ಹಾಕಿದವರು ಯಾರು‌? ಧಾರ್ಮಿಕ ವಿಚಾರದ ಮೂಲಕ ಜನರ ಭಾವನೆ ಕೆರಳಿಸುತ್ತಿರುವುದು ಯಾರು? ಸಂಘ- ಪರಿವಾರದವರು ಮಾಡಿದ್ದಲ್ಲವೇ?  ಸಮಾಜದಲ್ಲಿ ಶಾಂತಿ, ಭ್ರಾತೃತ್ವ ಹಾಳು ಮಾಡುತ್ತಿರುವುದ್ಯಾರು? ಬಿಜೆಪಿ, ಶ್ರೀರಾಮಸೇನೆ, ಬಜರಂಗದಳ, ಆರ್ ಎಸ್ಎಸ್, ಹಿಂದೂ ಮಹಾಸಭಾದವರೇ ಮಾಡುತ್ತಿರುವುದು. ಎಸ್ ಡಿಪಿಐ, ಪಿಎಫ್ಐ, ಆರ್ ಎಸ್ಎಸ್, ಭಜರಂಗದಳ ಯಾರೇ ಇರಲಿ,ಯಾರೇ ಹುಟ್ಟು ಹಾಕಿರಲಿ, ಅವರನ್ನು ಪತ್ತೆ ಹಚ್ಚಿ ತನಿಖೆ ಮಾಡಬೇಕು ಎಂದು ಸಿದ್ದರಾಮಯ್ಯ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next