Advertisement

ಬೆಳಗಾವಿ ಚುನಾವಣೆ :ಸತೀಶ್ ಹೆಸರನ್ನುಶಿಫಾರಸ್ಸುಮಾಡಿದ್ದೇವೆ : ಸಿದ್ದರಾಮಯ್ಯ

07:51 PM Mar 20, 2021 | Team Udayavani |

ಮೈಸೂರು : ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಸದನದಲ್ಲಿ ಪ್ರಸ್ತಾಪ ಮಾಡ್ತೀನಿ ಎಂದು ಮೈಸೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

Advertisement

ಬೆಳಗಾವಿ ಲೋಕಸಭೆ ಉಪ ಚುನಾವಣೆಗೆ ಸತೀಶ್ ಜಾರಕಿಹೊಳಿ ಹೆಸರನ್ನ ಶಿಫಾರಸ್ಸು ಮಾಡಿದ್ದೇವೆ. ಬಹುತೇಕ ಸತೀಶ್ ಜಾರಕಿಹೊಳಿಗೆ ಟಿಕೆಟ್ ಫೈನಲ್ ಆಗಲಿದೆ. ಪ್ರತಾಪ್ ಗೌಡ ಪಾಟೀಲ್ ಪಕ್ಷ ತೊರೆದದ್ದು ರಾಜ್ಯ ಬಿಜೆಪಿ ಸರ್ಕಾರದ  ದುರಾಡಳಿತ. ಈ ವಿಚಾರಗಳು ಉಪ ಚುನಾವಣೆಯಲ್ಲಿ ಚರ್ಚೆಗೆ ಬರಲಿವೆ ಎಂದರು

ಉಪ ಚುನಾವಣೆಗಳಲ್ಲಿ ನಾವೆ ಗೆಲ್ತೀವಿ ಎಂಬ ಸಿಎಂ ಮಾತಿಗೆ ಉತ್ತರಿಸಿದ ಸಿದ್ಧರಾಮಯ್ಯ, ಯಡಿಯೂರಪ್ಪ ಇನ್ನೇನು ಸೋಲ್ತೀವಿ ಅಂತ ಹೇಳಕಾಗುತ್ತಾ. ಓಟ್‌ ಗಳೆಲ್ಲಾ ಯಡಿಯೂರಪ್ಪನ ಜೇಬಲಿದ್ದಾವ. 17 ನೇ ತಾರೀಖು ಜನತೆ ಉತ್ತರ ಕೊಡಲಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next