Advertisement

ಕಾಂಗ್ರೆಸ್ ಕಾಲದ ನೇಮಕಾತಿ ಅಕ್ರಮ: ಆ ಸಮಯದಲ್ಲಿ ಯಾಕೆ ಮಾತಾಡಿಲ್ಲ?; ಸಿಎಂಗೆ ಸಿದ್ದು ಪ್ರಶ್ನೆ

02:14 PM Jul 06, 2022 | Team Udayavani |

ಬೆಂಗಳೂರು: ಕಾಂಗ್ರೆಸ್ ಕಾಲದಲ್ಲಿ ನಡೆದಿರುವ ನೇಮಕಾತಿ ಅಕ್ರಮಗಳ ಕುರಿತು ದಾಖಲೆ ಬಿಡುಗಡೆಯ ಸಿಎಂ ಹೇಳಿಕೆಗೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಈ ಕುರಿತು ಮಾತಾನಾಡಿರುವ ಅವರು, ಯಾಕೆ, ವಿರೋಧ ಪಕ್ಷದಲ್ಲಿದ್ದಾಗ ಏನ್ ಮಾಡುತ್ತಾ ಇದ್ರಿ?  ಕಡ್ಲೆಪುರಿ ತಿಂತಾ ಇದ್ರಾ? ದಾಖಲೆ‌ ಇದ್ದರೆ ಹೇಳಬೇಕಿತ್ತಲ್ಲಾ? ನಮ್ಮ ಕಾಲದ ನೇಮಕಾತಿ ಬಗ್ಗೆ ತನಿಖೆ ಮಾಡಿಸಿ. ಯಾಕೆ ಸುಮ್ಮನಿದ್ರಿ? ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಚಂದ್ರಶೇಖರ ಗುರೂಜಿ ಹತ್ಯೆ ಪ್ರಕರಣ : ಮರಣೋತ್ತರ ಪರೀಕ್ಷೆಯಲ್ಲಿ ಮಹತ್ವದ ಸುಳಿವು

ಆ ಸಮಯದಲ್ಲಿ ಯಾಕೆ ಮಾತಾಡಿಲ್ಲ? ನನ್ನ ‌ಉಳಿಸೋಕೆ ಮಾತಾಡಿರಲಿಲ್ವಾ? ಎಂದು ಸಿಎಂ ಹೇಳಿಕೆಗೆ ಸವಾಲು ಹಾಕಿದರು.

ಪಿಎಸ್ ಐ ಪ್ರಕರಣದಲ್ಲಿ ನೈತಿಕತೆ ಇದ್ದರೆ ಗೃಹ ಸಚಿವರನ್ನು ವಜಾಮಾಡಬೇಕು. ಸದನಕ್ಕೆ ಗೃಹ ಸಚಿವರು, ಸಿಎಂ ತಪ್ಪು ಮಾಹಿತಿ ನೀಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next