Advertisement

ದುಪ್ಪಟ್ಟ ಧರಿಸಲು ಅವಕಾಶ ನೀಡುವಂತೆ ಸರಕಾರಕ್ಕೆ ಸಿದ್ದರಾಮಯ್ಯ ಮನವಿ

05:34 PM Mar 24, 2022 | Team Udayavani |

ವಿಧಾನಸಭೆ : ಮುಸ್ಲಿಂ ವಿದ್ಯಾರ್ಥಿನಿಯರಿಗೆ ತರಗತಿಯಲ್ಲಿ ದುಪ್ಪಟ್ಟ ಧರಿಸುವುದಕ್ಕೆ ಅವಕಾಶ ನೀಡಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸರಕಾರಕ್ಕೆ ಮನವಿ ಮಾಡಿದ್ದಾರೆ.

Advertisement

ನಾನು ಹಿಜಾಬ್ ಬಗ್ಗೆ ಪ್ರಸ್ತಾಪಿಸುವುದಕ್ಕೆ ಹೋಗುವುದಿಲ್ಲ. ಏಕೆಂದರೆ ಅದೀಗ ಸುಪ್ರೀಂ‌ಕೋರ್ಟ್ ನಲ್ಲಿ ವಿಚಾರಣಾ ಹಂತದಲ್ಲಿದೆ . ಆದರೆ ನಿನ್ನೆ ಕೆಲ ಮುಸ್ಲಿಂ ಧರ್ಮ ಗುರುಗಳು ನಮ್ಮನ್ನು ಭೇಟಿ ಮಾಡಿ ಈ ಮನವಿ ಸಲ್ಲಿಸಿದ್ದಾರೆ ಎಂದರು.

ಅವರು ಶಾಲೆ- ಕಾಲೇಜಿನಲ್ಲಿ ಸಮವಸ್ತ್ರವನ್ನೇ ಧರಿಸುತ್ತಾರೆ. ಆದರೆ ಅದೇ ಬಣ್ಣದ ದುಪ್ಪಟವನ್ನು ಬಳಸುವುದಕ್ಕೆ ಅವಕಾಶ ಕೋರಿದ್ದಾರೆ. ಅದು ಬುರ್ಖಾ ಅಥವಾ‌ ಹಿಜಾಬ್ ಅಲ್ಲ. ಸರಕಾರ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು. ಇದು ಹೆಣ್ಣು ಮಕ್ಕಳ‌ ಶಿಕ್ಷಣದ ಹಕ್ಕಿನ ಪ್ರಶ್ನೆ ಎಂದು ಅಭಿಪ್ರಾಯಪಟ್ಟರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್,  ಶಿಕ್ಷಣದಿಂದ ವಂಚಿತರಾಗದಂತೆ ನಾವು ಸಾಕಷ್ಟು ಸಲಹೆ ನೀಡಿದರೂ ಆ ಆರು ಮಂದಿ ವಿದ್ಯಾರ್ಥಿನಿಯರು ನಮ್ಮ‌ಮಾತು ಕೇಳಿಲ್ಲ. ನೀವೇ ಸ್ವಲ್ಪ ಅವರ ಮನವೊಲಿಸಿ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next