Advertisement

ನಾವು ಹಲಾಲ್‌ ಮಾಡಿದ ಮರಿ ತಿಂದಿಲ್ವಾ: ಸಿದ್ದರಾಮಯ್ಯ ಪ್ರಶ್ನೆ

10:17 PM Apr 03, 2022 | Team Udayavani |

ಬೆಂಗಳೂರು: ಹಲಾಲ್‌ ಮಾಡುವ ಮರಿಗಳನ್ನು ನಾವು ತಿನ್ನುವುದಿಲ್ಲವೇ? ಎಷ್ಟೋ ವರ್ಷಗಳಿಂದ ಸೇವನೆ ಮಾಡುತ್ತಿದ್ದರೂ ಈಗ ಅನಗತ್ಯವಾಗಿ ಸಂಬಂಧ ಇಲ್ಲದ ವಿಷಯಗಳನ್ನು ಎತ್ತಿಕೊಂಡು ಶಾಂತಿ ಕದಡುವುದು ಎಷ್ಟು ಸರಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು.

Advertisement

ಹಲಾಲ್‌ ಅವರ (ಅಲ್ಪಸಂಖ್ಯಾಕರ) ಪದ್ಧತಿ. ಅದು ಅವರವರ ನಂಬಿಕೆಗಳಾಗಿವೆ. ನಾವೂ ಹಬ್ಬ-ಹರಿದಿನಗಳಲ್ಲಿ ಮರಿ ಕೊಯ್ಯುವುದಿಲ್ಲವೇ? ರಕ್ತ ಕೆಳಗೆ ಚೆಲ್ಲುವುದಿಲ್ಲವೇ?  ಈಗ ಏಕಾಏಕಿ ವಿವಾದ ಸೃಷ್ಟಿಸುವುದು ಯಾಕೆ? ಮನುಷ್ಯರಿಗೆ ಸಂಬಂಧವಿಲ್ಲದ ವಿಚಾರಗಳನ್ನು ಎತ್ತಿ, ಸಮಾಜದಲ್ಲಿ ಅಶಾಂತಿ ಉಂಟುಮಾಡುವುದೇ ಕೆಲವರಿಗೆ ಕೆಲಸವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ರೀತಿ ಶಾಂತಿ ಕದಡುವುದು ಸರಿ ಅಲ್ಲ. ಈ ಬೆಳವಣಿಗೆಗಳಿಂದ ಕಾನೂನು-ಸುವ್ಯವಸ್ಥೆಗೆ ಭಂಗ ಉಂಟಾಗುತ್ತದೆ. ಅದು ಅಭಿವೃದ್ಧಿ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next