Advertisement

ಸಿದ್ದರಾಮಯ್ಯ ಮತ್ತು ನಾನು ಜೋಡೆತ್ತು ಇದ್ದಂತೆ : ಪರಮೇಶ್ವರ್‌

09:54 AM Nov 26, 2019 | sudhir |

ಹುಣಸೂರು: ಸಿದ್ದರಾಮಯ್ಯ ಮತ್ತು ನಾನು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಕಾಂಗ್ರೆಸ್‌ನ ಜೋಡೆತ್ತುಗಳು ಕೂಡ. ಆದರೆ ಮಾಧ್ಯಮಗಳಲ್ಲಿ ಯಾವುದೋ ಹಳೆಯ ಫೋಟೋಗಳನ್ನು ಹಾಕಿ, ನನಗೂ ಸಿದ್ದರಾಮಯ್ಯ ಅವರಿಗೂ ಆಗುವುದಿಲ್ಲ ಎಂದು ಬಿಂಬಿಸುತ್ತಾರೆ. ವಾಸ್ತವವಾಗಿ ನಾವಿಬ್ಬರೂ ಕಾಂಗ್ರೆಸ್‌ ಪಕ್ಷದಲ್ಲಿ ಜೋಡೆತ್ತುಗಳು ಎಂದು ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್‌ ಹೇಳಿದರು.

Advertisement

ತಾಲೂಕಿನ ಕಟ್ಟೆಮಳಲವಾಡಿ ಹಾಗೂ ಬನ್ನಿಕುಪ್ಪೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಎಚ್‌.ಪಿ. ಮಂಜುನಾಥ್‌ ಪರ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿ, ವಿಶ್ವಣ್ಣ, ದೇವರಾಜ ಅರಸರ ಗರಡಿಯಲ್ಲಿ ಬೆಳೆದು ಇದೀಗ ಸಂವಿಧಾನವನ್ನೇ ಬುಡಮೇಲು ಮಾಡುವಂತ ಹೇಳಿಕೆ ನೀಡುತ್ತಿರುವ ಬಿಜೆಪಿ ಪಕ್ಷಕ್ಕೆ ಸೇರಿದ್ದಿರಲ್ಲಾ? ನಿಮಗ್ಯಾವ ನೈತಿಕತೆಯಿದೆ ಎಂದು ಪ್ರಶ್ನಿಸಿದರು.

ಕಾಂಗ್ರೆಸ್‌ ಎಲ್ಲ ಅಧಿಕಾರವನ್ನು ಕಲ್ಪಿಸಿತ್ತು. ಕಾಂಗ್ರೆಸ್‌ ಎಂದರೆ ಬಡವರ, ಶೋಷಿತರ, ಹಿಂದುಳಿದ ವರ್ಗಗಳ, ನೊಂದವರ ಪರ ಪಕ್ಷ. ಆದರೆ ಬಿಜೆಪಿ ಈಗ ದೇಶದಲ್ಲಿ ಒಡೆದಾಳುವ ನೀತಿ ಹಾಗೂ ಆಪರೇಷನ್‌ ಕಮಲದಿಂದ ಅಧಿಕಾರ ಹಿಡಿಯುವ ಸ್ಥಿತಿಗೆ ತಲುಪಿದೆ. ಅಂತಹ ಪಕ್ಷಕ್ಕೆ ಸೇರಿದ್ದೀರಲ್ಲಾ? ನಾಚಿಕೆಯಾಗುವುದಿಲ್ಲವಾ? ಎಂದು ತರಾಟೆಗೆ ತೆಗೆದುಕೊಂಡರು.

ಜೆಡಿಎಸ್‌ನಲ್ಲಿ ಎಲ್ಲ ಅಧಿಕಾರ ಅನುಭವಿಸಿ ಅವರಿಗೂ ಕೈಕೊಟ್ಟು ಈಗ ಸಂವಿಧಾನವನ್ನು ಅಂಬೇಡ್ಕರ್‌ ಒಬ್ಬರೇ ಬರೆದಿಲ್ಲವೆಂದು ಹೇಳಿಕೊಳ್ಳುವ ಬಿಜೆಪಿ ಜತೆ ಸೇರಿಕೊಂಡಿರುವ ವಿಶ್ವನಾಥ್‌ ಅವರಂತಹ ಪûಾಂತರಿಗಳನ್ನು ಜನರು ಸೋಲಿಸಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next