Advertisement

ಸಿದ್ದರಾಮಯ್ಯ, ಎಚ್‌.ಡಿ. ಕುಮಾರಸ್ವಾಮಿ, ಕುಂ.ವೀರಭದ್ರಪ್ಪ ಸೇರಿ 61 ಮಂದಿಗೆ ಬೆದರಿಕೆ

12:22 AM Apr 09, 2022 | Team Udayavani |

ಬಳ್ಳಾರಿ: ಹಿಜಾಬ್‌-ಮುಸಲ್ಮಾನರ ಪರ ಹಾಗೂ ಭಗವದ್ಗೀತೆ ವಿರುದ್ಧವಾಗಿ ಸರಕಾರಕ್ಕೆ ಪತ್ರ ಬರೆದಿರುವ ಹಿನ್ನೆಲೆಯಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಶಾಸಕ ಎಚ್‌.ಡಿ. ಕುಮಾರಸ್ವಾಮಿ ಸೇರಿ 61 ಜನರಿಗೆ ಜೀವ ಬೆದರಿಕೆಯೊಡ್ಡಿರುವ ಅನಾಮಧೇಯ ಪತ್ರ ಸಾಹಿತಿ ಕುಂ. ವೀರಭದ್ರಪ್ಪ ಅವರ ಮನೆಗೆ ಅಂಚೆ ಮೂಲಕ ತಲುಪಿದೆ.

Advertisement

ಎರಡು ಪುಟಗಳ ಕೈಬರಹದ ಈ ಪತ್ರ ಎ. 6ರಂದು ಕೊಟ್ಟೂರಿನಲ್ಲಿರುವ ಕುಂ. ವೀರಭದ್ರಪ್ಪನವರ ಮನೆಗೆ ಬಂದಿದೆ. ಭದ್ರಾವತಿಯಿಂದ ಪತ್ರ ಪೋಸ್ಟ್‌ ಮಾಡಲಾಗಿದೆ. ಆದರೆ ಪತ್ರ ಬರೆದವರ ವಿವರ ಇಲ್ಲ. ಸಹಿಷ್ಣು ಹಿಂದು’ ಎಂದಷ್ಟೇ ಪತ್ರದೊಳಗೆ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ:ಸಿರಿವಂತ ರೈತರಿಗೆ ತೆರಿಗೆ ಹೊರೆ? ಕೇಂದ್ರ ಸರಕಾರದಿಂದ ಚಿಂತನೆ

ಎಡಬಿಡಂಗಿ ಬುದ್ಧಿಜೀವಿ ಸಾಹಿತಿ ಗಳಿಗೇ.. ಹಿಜಾಬ್‌- ಮುಸ್ಲಿ ಮರ ಪರ ಹಾಗೂ ಭಗವ ದ್ಗೀತೆ ವಿರುದ್ಧವಾಗಿ ಸರಕಾರಕ್ಕೆ ಪತ್ರ ಬರೆದಿದ್ದೀರಿ. ನೀವು ನಮ್ಮ ದೇಶದ ಅನ್ನ ಉಂಡು, ದೇಶದ ಗಾಳಿ ತೆಗೆದುಕೊಂಡು ದೇಶಕ್ಕೆ ದ್ರೋಹ ಬಗೆಯುತ್ತಿದ್ದೀರಿ. ನಿಮ್ಮ ಸರ್ವನಾಶ ನಿಶ್ಚಿತ. ನಿಮ್ಮೆಲ್ಲರ ಸಾವು ಹತ್ತಿರವಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next