Advertisement

ಸಿದ್ದರಾಮಯ್ಯ ಇಡೀ ವ್ಯವಸ್ಥೆ ಹಾಳು ಮಾಡಿದ್ದಾರೆ: ಶೋಭಾ ಕರಂದ್ಲಾಜೆ

01:18 PM Feb 22, 2023 | Team Udayavani |

ಕೊಪ್ಪಳ: ಸಿದ್ದರಾಮಯ್ಯ ಅವರು ಅಹಿಂದ ಹೆಸರಿನಲ್ಲಿ ಅಧಿಕಾರಕ್ಕೆ ಬಂದರು. ಅವರು ಅಧಿಕಾರಕ್ಕೆ ಬಂದ ತಕ್ಷಣವೇ ಮಾಡಿದ್ದು, ಟಿಪ್ಪು ಜಯಂತಿ ಆಚರಣೆಗೆ ತಂದಿದ್ದು. ವ್ಯಕ್ತಿ ಪೂಜೆ ಮಾಡೋದು ಮುಸ್ಲಿಂ ಧರ್ಮದಲ್ಲಿ ಇಲ್ಲ. ಆದರೆ ಶಾಲಾ ಮಕ್ಕಳಲ್ಲಿ ಜಾತಿ ತಂದರು. ವೀರಶೈವ ಧರ್ಮ ಹೊಡೆಯೋಕೆ ನೋಡಿದರು. ಇಡೀ ವ್ಯವಸ್ಥೆ ಹಾಳು ಮಾಡುವ ಕೆಲಸ ಮಾಡಿದರು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

Advertisement

ಕೊಪ್ಪಳದ ಬಿಜೆಪಿ ಕಾರ್ಯಾಲಯದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ರಾಜ್ಯ ಸರಕಾರದಿಂದ ಪಿ.ಎಫ್.ಐ  ಬ್ಯಾನ್ ಆಗಿದೆ. ಆದರೆ ಹಿಂದೆ ಮಂಗಳೂರು, ಬೆಂಗಳೂರು, ಮೈಸೂರಿನ ಜೈಲಿನಲ್ಲಿದ್ದ ಪಿ.ಎಫ್.ಐ ಕಾರ್ಯಕರ್ತರನ್ನು ಸಿದ್ದರಾಮಯ್ಯ ಸರ್ಕಾರ ಬಿಡುಗಡೆ ಮಾಡಿದರು. ಮುಸ್ಲಿಂ ಮತಗಳ ಓಲೈಕೆಗೆ ಕಾಂಗ್ರೆಸ್ ರಾಜಕಾರಣ ಮಾಡುತ್ತಾ ಬಂದಿದ್ದಾರೆ ಎಂದರು.

ನಾವು ಒಲೈಕೆಯಂಥ ರಾಜಕಾರಣ ಮಾಡುವುದಿಲ್ಲ. ಶಾದಿ ಭಾಗ್ಯ ಒಂದು ವರ್ಗಕ್ಕೆ ಯಾಕೆ ಕೊಟ್ಟರು. ಓಲೈಕೆ, ಧರ್ಮದ ರಾಜಕಾರಣ ಮಾಡ್ತಾ ಇರೋದು ಕಾಂಗ್ರೆಸ್ನವರು ಎಂದರು.

ಟಿಪ್ಪುನ್ನು ಹೊಡೆದಂತೆ ಸಿದ್ದರಾಮಯ್ಯನವರನ್ನು ಹೊಡೆಯುವ ಅಶ್ವಥ್ ನಾರಾಯಣ ಹೇಳಿರುವ ವಿಚಾರವಾಗಿ ಮಾತನಾಡಿ, ಇದು ನೂರಕ್ಕೆ ನೂರು ತಪ್ಪು, ಆ ರೀತಿ ಯಾರೂ ಹೇಳಬಾರದು. ಪ್ರಜಾ ತಂತ್ರ ವ್ಯವಸ್ಥೆಯಲ್ಲಿ ಎಲ್ಲರಿಗೂ ಮಾತನಾಡುವ ಅವಕಾಶ ಇದೆ. ಅವರವರ ಪಕ್ಷ, ಅವರವರ ಸಿದ್ದಾಂತದ ಮೇಲೆ ಮಾತನಾಡಬೇಕು. ಸಿದ್ದಾಂತದ ಆಧಾರದ ಮೇಲೆ ಪಕ್ಷ ಕಟ್ಟಬೇಕು. ನಾರಾಯಣ ಮಾತನಾಡಿದ್ದು ತಪ್ಪು. ನಮ್ಮ ಪಕ್ಷದಲ್ಲಿ ಇಂತಹ ಸಿದ್ದಾಂತ ಇಲ್ಲ ಎಂದರು.

ಐಎಎಸ್ ಹಾಗು ಐಪಿಎಸ್ ಅಧಿಕಾರಿಗಳ ಮಧ್ಯೆದ ಹೇಳಿಕೆಗಳು, ಆರೋಪಗಳು ಸರಿ ಅಲ್ಲ ಎಂದರು.

Advertisement

ಕೇಂದ್ರ ಮತ್ತು ರಾಜ್ಯದಲ್ಲಿ ನಮ್ಮ ಸರಕಾರವಿದೆ. ಅಭಿವೃದ್ಧಿ ಕೆಲಸಕ್ಕೆ ಡಬಲ್ ಎಂಜನ್ ಸರಕಾರ ಬರಬೇಕೆಂದು ಮೋದಿ ಹೇಳಿದ್ದಾರೆ. ಹಿಂದೆ ಭಾರತ ಪ್ರಧಾನಿಗಳು ವಿದೇಶಕ್ಕೆ ಹೋದರೆ ಸಾಲಕ್ಕಾಗಿ, ಭಿಕ್ಷೆಗಾಗಿ ಬರುತ್ತಿದ್ದಾರೆ ಎನ್ನುತ್ತಿದ್ದರು. ಆದರೆ ಈಗ ಭಾರತ ಪ್ರಬಲವಾಗಿದೆ. ಉಕ್ರೇನ್ ರಷ್ಯಾದ ಯುದ್ದದಲ್ಲಿ ಭಾರತದ ಪ್ರಧಾನಿ ಹೇಳಿದಂತಾಗಿದೆ. ಪ್ರಧಾನಿಯವರು ಈಗಲೂ 2024 ರ ಚುನಾವಣೆಯ ಬಗ್ಗೆ ಮಾತನಾಡುತ್ತಿಲ್ಲ. ಪ್ರಧಾನಿಯವರು ಅಭಿವೃದ್ದಿ ಗುರಿಯಾಗಿಟ್ಟುಕೊಂಡು ಮಾತನಾಡುತ್ತಾರೆ ಎಂದರು.

ಸಂಸದರ ನಿಧಿಯನ್ನು ಆಸ್ಪತ್ರೆಯ ಉನ್ನತೀಕರಣಕ್ಕೆ ಬಳಸಿಕೊಳ್ಳಲಾಗಿದೆ. ಕೃಷಿ ಬಜೆಟ್ ಯುಪಿಎ ಸರಕಾರದಲ್ಲಿ 23 ಸಾವಿರ ಕೋಟಿ ರೂಪಾಯಿ ಇತ್ತು. ಈಗ ಬಜೆಟ್ ನಲ್ಲಿ 1.25 ಲಕ್ಷ ಕೋಟಿ ರೂಪಾಯಿ ಕೃಷಿಗೆ ಇಟ್ಟಿದೆ. ಕೃಷಿ ಮೂಲಭೂತ ಸೌಲಭ್ಯಕ್ಕೆ ಲಕ್ಷ ಕೋಟಿ ನೀಡಲಾಗಿದೆ. ಎಂಎಸ್ ಪಿ ದರ ಹೆಚ್ಚಳ ಮಾಡಿದೆ.‌ ರಸಗೊಬ್ಬರಕ್ಕೆ ಹೆಚ್ಚಿನ ಸಬ್ಸಿಡಿ ನೀಡಲಾಗಿದೆ ಎಂದರು.

ಅಮಿತಾ ಶಾ ಆಮೂಲ್ ಒಂದು ಮಾಡಲು ಹೇಳಿಲ್ಲ. ಅಮೂಲ್ ಮಾದರಿಯಲ್ಲಿ ಬೆಳೆಯಲು ಟೆಕ್ನಿಲಾಜಿ ಬಳಸಿಕೊಳ್ಳಲು ಹೇಳಿದ್ದಾರೆ. ಇಂಧನ ಹಾಗು ಖಾದ್ಯ ತೈಲ್ ಗಳನ್ನು ಆತ್ಮ ನಿರ್ಭರ ಯೋಜನೆಗೆ ಒಳಪಡಿಸಲು ಮುಂದಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next